ADVERTISEMENT

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಖಂಡನೀಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 16:08 IST
Last Updated 24 ಸೆಪ್ಟೆಂಬರ್ 2024, 16:08 IST
ನವಲಗುಂದ ಪಟ್ಟಣದಲ್ಲಿ ನಡೆದ  ದಲಿತ ಸಮುದಾಯದ ಮುಖಂಡರ ಸಭೆ ನಂತರ ನಂದಿನಿ ಹಾದಿಮನಿ, ಜಿಲ್ಲಾ ಸಂಚಾಲಕ ಕಾಶೀನಾಥ ಕಾಳೆ ಮಾತನಾಡಿದರು
ನವಲಗುಂದ ಪಟ್ಟಣದಲ್ಲಿ ನಡೆದ  ದಲಿತ ಸಮುದಾಯದ ಮುಖಂಡರ ಸಭೆ ನಂತರ ನಂದಿನಿ ಹಾದಿಮನಿ, ಜಿಲ್ಲಾ ಸಂಚಾಲಕ ಕಾಶೀನಾಥ ಕಾಳೆ ಮಾತನಾಡಿದರು   

ನವಲಗುಂದ: ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿರುವ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿ ವಲಯ-1ರಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಹಾಗೂ ಕನಕದಾಸರ ಭಾವಚಿತ್ರವನ್ನು ಉಲ್ಟ ಇಟ್ಟಿರುವುದಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮಹಿಳಾ ತಾಲ್ಲೂಕು ಅಧ್ಯಕ್ಷೆ ನಂದಿನಿ ಹಾದಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ದಲಿತ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ನಂತರ ಮಾತನಾಡಿದ ಅವರು,  ‘ಘಟನೆಗೆ ಸಂಬಂಧಿಸಿದವರನ್ನು ಅಮಾನತು ಮಾಡಬೇಕು ಇಲ್ಲದಿದ್ದರೆ  ಹೋರಾಟ ಮಾಡಬೇಕಾಗುತ್ತದೆ‘ ಎಂದು ಎಚ್ಚರಿಸಿದರು.

ಜಿಲ್ಲಾ ಸಂಚಾಲಕರಾದ ಕಾಶೀನಾಥ ಕಾಳೆ ಮಾತನಾಡಿ, ಮಹಾನ್ ವ್ಯಕ್ತಿಯ ಭಾವಚಿತ್ರಕ್ಕೆ ಅವಮಾನಿಸಿರುವುದು ಖಂಡನೀಯ  ಎಂದು ಅಸಮಾಧಾನ ವ್ಯಕ್ತ ಪಡಿಸಿದರು

ADVERTISEMENT

ಬಸವರಾಜ ಕರಡಿಗುಡ್ಡ, ಶಿವಾನಂದ ಛಲವಾದಿ, ಅಸ್ವಿನಿ ಛಲವಾದಿ, ರೇಣುಕಾ ದೊಡಮನಿ, ಶೇಕಪ್ಪ ಹನಸಿ, ಮಂಜುನಾಥ ಅಮಾತನವರ, ಆಕಾಶ ಛಲವಾದಿ ಇತರರು ಇದ್ದರು.

ನವಲಗುಂದ ತಾಲ್ಲೂಕಿನ ಅಳಗವಾಡಿ ನೀರಾವರಿ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರ ಉಲ್ಟ ಇಟ್ಟಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.