ADVERTISEMENT

ಕಬಡ್ಡಿ ಅಂಕಣದಲ್ಲಿ ರೈಡರ್‌ ಆದ ಸಭಾಪತಿ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 18:31 IST
Last Updated 23 ಜನವರಿ 2023, 18:31 IST
 ಕಬಡ್ಡಿ ಅಂಕಣದಲ್ಲಿ ರೈಡರ್‌ ಆದ ಸಭಾಪತಿ ಹೊರಟ್ಟಿ
ಕಬಡ್ಡಿ ಅಂಕಣದಲ್ಲಿ ರೈಡರ್‌ ಆದ ಸಭಾಪತಿ ಹೊರಟ್ಟಿ   

ಧಾರವಾಡ: ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ದಾಖಲೆ ಗೆಲುವು ಸಾಧಿಸಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಬಡ್ಡಿ ಅಂಕಣದಲ್ಲೂ ರೈಡರ್‌ ಆಗಿ ಅಂಕ ಗಳಿಸುವ ಮೂಲಕವೂ ಗಮನ ಸೆಳೆದರು.

ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ನೆಹರು ಕಾಲೇಜಿನ ಮೈದಾನದಲ್ಲಿ ಅಮೃತ್ ದೇಸಾಯಿ ಸ್ಪೋರ್ಟ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಹೆಬ್ಬಳ್ಳಿ ಕಬಡ್ಡಿ ಉತ್ಸವಕ್ಕೆ ಸ್ವತಃ ರೈಡರ್‌ ಆಗಿ ಮೈದಾನಕ್ಕೆ ಇಳಿಯುವ ಮೂಲಕ ಚಾಲನೆ ನೀಡಿದರು.

ಸೋಮವಾರ ರಾತ್ರಿ ನಡೆದ ಹೊನಲು ಬೆಳಕಿನ ಪಂದ್ಯಾವಳಿಗೆ ಚಾಲನೆ ನೀಡಲು ಸ್ವತಃ ರೈಡರ್‌ ಆಗಿ ಹೋಗಲು ನಿರ್ಧರಿಸಿ ಚಪ್ಪಲಿ ಕಳೆದು, ಅಂಕಣಕ್ಕೆ ನುಗ್ಗಿದರು. ಯುವಕರನ್ನೂ ನಾಚಿಸುವಂತೆ ಅಂಕಣದಲ್ಲಿ ಓಡಾಡಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹಾಗೂ ಶಾಸಕ ಅಮೃತ ದೇಸಾಯಿ ಹಾಗೂ ಇತರ ಗಣ್ಯರು ಹೊರಟ್ಟಿ ಅವರ ಉತ್ಸಾಹಕ್ಕೆ ಚಪ್ಪಾಳೆಯ ಮಳೆಗರೆದರು. ನೆರೆದ ಜನ ಇದನ್ನು ಕಣ್ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.