ಹುಬ್ಬಳ್ಳಿ: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬುಧವಾರ ನಗರಕ್ಕೆ ಬಂದಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ನಗರದಿಂದ ಧಾರವಾಡದವರೆಗೆ ಬಿಆರ್ಟಿಎಸ್ನ ಚಿಗರಿ ಬಸ್ನಲ್ಲಿ ಸಂಚರಿಸಿದರು.
ಮೊದಲು ಗೋಕುಲ ರಸ್ತೆಯ ಬಿಆರ್ಟಿಎಸ್ ಡಿಪೊಗೆ ಭೇಟಿ ನೀಡಿದ ವಿಜಯ ಭಾಸ್ಕರ್ ಅಲ್ಲಿಂದ ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ ದರ್ಪಣ ಜೈನ್, ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಬಿಆರ್ಟಿಎಸ್ ಅಧಿಕಾರಿಗಳಿಂದ ಬಸ್ಗಳ ನಿರ್ವಹಣೆ, ಕಾರಿಡಾರ್ಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಗೋಕುಲ ರಸ್ತೆಯಿಂದಲೇ ಅಧಿಕಾರಿಗಳೊಂದಿಗೆ ಚಿಗರಿ ಬಸ್ ಹತ್ತಿದರು. ನಗರದಿಂದ ಧಾರವಾಡದ ಮಿತ್ರ ಸಮಾಜದ ನಿಲ್ದಾಣ ತಲುಪಿದ ಮುಖ್ಯ ಕಾರ್ಯದರ್ಶಿಗಳು ಅಲ್ಲಿ ದರ್ಪಣ ಜೈನ್ ಅವರೊಂದಿಗೆ ಚರ್ಚಿಸಿದರು.
ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರವೇ ಪೂರೈಸಿ ಎಂದು ಸೂಚನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.