ಅಳ್ನಾವರ: ನಿಯೋಜಿತ ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೋಂದಣಿ ಪೂರ್ವ ಷೇರು ಸಂಗ್ರಹ ಕಾರ್ಯ ಆರಂಭಿಸಲಾಗಿದೆ ಎಂದು ಮುಖ್ಯ ಪ್ರವರ್ತಕ ಮಲ್ಲಪ್ಪ ರಂಗಪ್ಪ ಗಾಣಿಗೇರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಳ್ನಾವರ ತಾಲ್ಲೂಕನ್ನು ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಧಾರವಾಡ ಇದರ ಕಾರ್ಯ ವ್ಯಾಪ್ತಿಯಿಂದ ಹೊರತುಪಡಿಸಿರುವ ಇಲಾಖೆ, ಹೊಸ ತಾಲ್ಲೂಕಿನಲ್ಲಿ ಪಿಎಲ್ಡಿ ಬ್ಯಾಂಕ್ ತೆರೆಯಲು ಅನುಮೋದನೆ ನೀಡಿದೆ ಎಂದರು.
ಅಳ್ನಾವರ ತಾಲ್ಲೂಕು ವ್ಯಾಪ್ತಿಯ ರೈತರು ₹1,200 ಮುಖ ಬೆಲೆಗೆ ಷೇರು ಮಾಡಿಸಿ, ಸಂಘದ ಪ್ರಗತಿಗೆ ಕೈಜೊಡಿಸಬೇಕು ಎಂದು ಗಾಣಿಗೇರ ತಿಳಿಸಿದ್ದಾರೆ. ನಿಯೋಜಿತ ಸಂಘಕ್ಕೆ 20 ಜನರನ್ನು ಪ್ರವರ್ತಕರನ್ನಾಗಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.