ಹುಬ್ಬಳ್ಳಿ: ಇಲ್ಲಿನ ಆರ್ಎಸ್ಎಸ್ನ ಕೇಶವ ಕುಂಜ ಕಚೇರಿಯಲ್ಲಿ ಆರ್ಎಸ್ಎಸ್ ಪ್ರಮುಖರಿಗೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿ ಮಠ ಅವರ ನೇತೃತ್ವದಲ್ಲಿ ರಾಷ್ಟಧ್ವಜ ಹಸ್ತಾಂತರಿಸಲಾಯಿತು.
ಮೊದಲಿಗೆ ನಮಗೆ ಬೇಡ, ನಮ್ಮ ಬಳಿ ರಾಷ್ಟ್ರಧ್ವಜ ಇದೆ ಎಂದು ಆಆರ್ಎಸ್ಎಸ್ನ ಪ್ರಮುಖರು ಹೇಳಿದರು. ಆರ್ಎಸ್ಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದರು.
ಆರ್ಎಸ್ಎಸ್ ಪ್ರಮುಖ ಅಮರನಾಥ ಅವರು ಕಚೇರಿಯಿಂದ ರಾಷ್ಟಧ್ವಜ ತಂದು ನಮ್ಮ ಬಳಿ ಇದೆ. ಇದನ್ನು ನಾವು ಹಾರಿಸುತ್ತೇವೆ ಎಂದರು.
ನಂತರ ರಾಷ್ಟ್ರ ಧ್ವಜ ಸ್ವೀಕರಿಸಿ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.