ಹುಬ್ಬಳ್ಳಿ: ಇಲ್ಲಿನ ವಾರ್ಡ್ ಸಂಖ್ಯೆ 82ರ ಬಿಡ್ನಾಳ ಮುಖ್ಯರಸ್ತೆಯ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಶನಿವಾರ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ‘ಹುಬ್ಬಳ್ಳಿ ಶಹರದಲ್ಲಿ ಗ್ರಾಮೀಣ ಸೊಗಡಿನಿಂದ ಕಂಗೊಳಿಸುವ ಬಿಡ್ನಾಳದಲ್ಲಿ ಸಿಸಿ ರಸ್ತೆ, ಗಟಾರ, ಯುಜಿಡಿ, ಬೀದಿದೀಪ ಅಳವಡಿಕೆ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಅನೇಕ ಕಾಮಗಾರಿ ಕೈಗೊಳ್ಳಲಾಗಿದೆ. ಇಲ್ಲಿನ ಮುಖ್ಯರಸ್ತೆಯ ಎರಡೂ ಬದಿಯ ಗಟಾರ ನಿರ್ಮಾಣಕ್ಕೆ ₹ 84 ಲಕ್ಷ ಅನುದಾನ ದೊರಕಿದೆ’ ಎಂದರು.
ಮೋಹನ ಅಸುಂಡಿ, ವಿಜುನಗೌಡ ಪಾಟೀಲ, ವೀರಭದ್ರಪ್ಪ ಮೇಟಿ, ಮೋಹನ ನಂದಿಹಳ್ಳಿ, ಈಶ್ವರಪ್ಪ ಅಂಚಟಗೇರಿ, ಚಂಬಣ್ಣ ಅಸುಂಡಿ, ಗಂಗಾಧರ ಕಲ್ಲಣ್ಣವರ, ಚನ್ನಪ್ಪ ಮುಗದ, ವೀರಭದ್ರಪ್ಪ ಅಸುಂಡಿ, ಮಲ್ಲಿಕಾರ್ಜುನ ಅಂಚಟಗೇರಿ, ಬಸವರಾಜ ಮೊಗದ, ಶಂಕ್ರಪ್ಪ ಅಸುಂಡಿ, ರುದ್ರಪ್ಪ ಕೂಡಲಗಿ, ಅಜರ್ ಮನಿಯಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.