ADVERTISEMENT

ಮಂಟೂರ ರಸ್ತೆಯ ಅರಳೀಕಟ್ಟಿ ಓಣಿಯಲ್ಲಿ ಗುಂಪು ಗಲಭೆ; ಮತ್ತೆ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:08 IST
Last Updated 15 ಜುಲೈ 2025, 7:08 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಹುಬ್ಬಳ್ಳಿ: ಮಂಟೂರ ರಸ್ತೆಯ ಅರಳೀಕಟ್ಟಿ ಓಣಿಯಲ್ಲಿ ಎರಡು ಗುಂಪಿನ ನಡುವೆ ಈಚೆಗೆ ನಡೆದ ಗಲಭೆಗೆ ಸಂಬಂಧಿಸಿ, ಶಹರ ಠಾಣೆ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ.

ADVERTISEMENT

ಅರಳಿಕಟ್ಟಿ ಕಾಲೊನಿಯ ಸಮೀರ್‌ ಬೇಪಾರಿ ಮತ್ತು ಹಮೀದ್‌ ಬೇಪಾರಿ ಬಂಧಿತರು. ಕೃತ್ಯಕ್ಕೆ ಬಳಸಿದ ಮೂರು ತಲ್ವಾರ್‌ಗಳನ್ನು ಅವರಿಂದ ವಶಪಡಿಸಿಕೊಂಡಿದ್ದಾರೆ. ವಿವಿಧ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಸಮೀರ್‌ ವಿರುದ್ಧ ಗೋವಾದಲ್ಲಿ ಐದು ಪ್ರಕರಣಗಳು ಹಾಗೂ ನಗರದ ರೈಲ್ವೆ, ಶಹರ ಮತ್ತು ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ. ಹಮೀದ್‌ ವಿರುದ್ಧ ಶಹರ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.

ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 22ಕ್ಕೆ ಏರಿದೆ.

ಗಾಂಜಾ ಮಾರಾಟ– ಬಂಧನ: ನಗರದ ಸ್ಟೇಷನ್‌ ರಸ್ತೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರನ್ನು ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿ, ₹30 ಸಾವಿರ ಮೌಲ್ಯದ 300 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕೇಶ್ವಾಪುರದ ಅಜಾದ್ ಕಾಲೊನಿಯ ಸಂದೀಪ, ಅರುಣ ಮತ್ತು ರಾಜು ಬಂಧಿತರು. ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.