ADVERTISEMENT

ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 16:46 IST
Last Updated 17 ಡಿಸೆಂಬರ್ 2020, 16:46 IST

ಹುಬ್ಬಳ್ಳಿ: ಕ್ರಿಸ್‌ಮಸ್‌, ಹೊಸವರ್ಷ ಮತ್ತು ಮಕರ ಸಂಕ್ರಾಂತಿ ಅಂಗವಾಗಿ ನೈರುತ್ಯ ರೈಲ್ವೆ ಆರಂಭಿಸಿರುವ ವಿಶೇಷ ರೈಲುಗಳ ಸಂಚಾರವನ್ನು ಇನ್ನು ಕೆಲ ದಿನಗಳ ಕಾಲ ಮುಂದುವರಿಸಲಾಗಿದೆ.

ಹುಬ್ಬಳ್ಳಿ–ಲೋಕಮಾನ್ಯ ತಿಲಕ್‌ ಟರ್ಮಿನಸ್‌ (ಜ. 30), ಲೋಕಮಾನ್ಯ ತಿಲಕ್‌ ಟರ್ಮಿನಸ್‌–ಹುಬ್ಬಳ್ಳಿ (ಜ. 31), ಧಾರವಾಡ–ಮೈಸೂರು ಎಕ್ಸ್‌ಪ್ರೆಸ್‌ (ಜ. 15), ಮೈಸೂರು–ಧಾರವಾಡ ಎಕ್ಸ್‌ಪ್ರೆಸ್‌ (ಜ. 16), ವಿಜಯವಾಡ–ಹುಬ್ಬಳ್ಳಿ (ಜ.19), ಹುಬ್ಬಳ್ಳಿ–ವಿಜಯವಾಡ (ಜ. 20), ಹುಬ್ಬಳ್ಳಿ–ಸಿಕೆಂದರಾಬಾದ್‌ (ಜ. 30), ಸಿಕೆಂದರಾಬಾದ್‌–ಹುಬ್ಬಳ್ಳಿ (ಜ. 31), ಕೆಎಸ್‌ಆರ್‌ ಬೆಂಗಳೂರು–ಧಾರವಾಡ (ಜ. 30) ಮತ್ತು ಧಾರವಾಡ–ಕೆಎಸ್‌ಆರ್‌ ಬೆಂಗಳೂರು (ಜ. 31), ಧಾರವಾಡ–ಸೊಲ್ಲಾಪುರ (ಜ. 15), ಸೊಲ್ಲಾಪುರ–ಧಾರವಾಡ (ಜ. 16), ಹುಬ್ಬಳ್ಳಿ–ಸೊಲ್ಲಾಪುರ (ಜ.15), ಸೊಲ್ಲಾಪುರ–ಹುಬ್ಬಳ್ಳಿ (ಜ.16), ಹುಬ್ಬಳ್ಳಿ–ಬಳ್ಳಾರಿ (ಜ.15), ಬಳ್ಳಾರಿ–ಹುಬ್ಬಳ್ಳಿ (ಜ.16) ರೈಲುಗಳ ಅವಧಿ ವಿಸ್ತರಣೆ ಮಾಡಲಾಗಿದೆ.

ಪ್ರತಿ ಶುಕ್ರವಾರ ಹುಬ್ಬಳ್ಳಿಯಿಂದ ವಾರಣಾಸಿಗೆ ತೆರಳುವ ರೈಲನ್ನು ಜ. 29ರ ವರೆಗೆ, ಪ್ರತಿ ಭಾನುವಾರ ವಾರಣಾಸಿಯಿಂದ–ಹುಬ್ಬಳ್ಳಿಗೆ ಬರುವ ರೈಲನ್ನು 30ರ ವರೆಗೆ ವಿಸ್ತರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.