ADVERTISEMENT

ಕಲ್ಲಿನಿಂದ ಹೊಡೆದು ಮಹಿಳೆಯ ಕೊಲೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 4:19 IST
Last Updated 13 ಮಾರ್ಚ್ 2022, 4:19 IST
ಕೊಲೆ ನಡೆದ ಹುಬ್ಬಳ್ಳಿಯ ಕೃಷ್ಣಭವನದ ಮುಂಭಾಗದ ಪ್ರದೇಶಕ್ಕೆ ಶನಿವಾರ ಡಿಸಿಪಿ ಸಾಹಿಲ್ ಬಾಗ್ಲಾ, ಶಹರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಆನಂದ ಒನಕುದರಿ ಹಾಗೂ ಎಸಿಪಿ ಆರ್.ಕೆ.ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು  
ಕೊಲೆ ನಡೆದ ಹುಬ್ಬಳ್ಳಿಯ ಕೃಷ್ಣಭವನದ ಮುಂಭಾಗದ ಪ್ರದೇಶಕ್ಕೆ ಶನಿವಾರ ಡಿಸಿಪಿ ಸಾಹಿಲ್ ಬಾಗ್ಲಾ, ಶಹರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಆನಂದ ಒನಕುದರಿ ಹಾಗೂ ಎಸಿಪಿ ಆರ್.ಕೆ.ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು     

ಹುಬ್ಬಳ್ಳಿ: ನಗರದ ಕೃಷ್ಣಭವನದ ಮುಂದೆ ಶುಕ್ರವಾರ ತಡರಾತ್ರಿ ಮಹಿಳೆಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿದೆ.

ದಾವಣಗೆರೆಯ ಸುಮಾ (38) ಕೊಲೆಯಾದವರು. ಇವರು ಬಳ್ಳಾರಿಯ ವ್ಯಕ್ತಿಯನ್ನು ಮದುವೆಯಾಗಿ ವರ್ಷದ ಹಿಂದೆ ಹುಬ್ಬಳ್ಳಿಗೆ ಬಂದು ನೆಲೆಸಿದ್ದು, ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದರು.

‘ಅಪರಿಚಿತರ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸುಮಾ ಅವರನ್ನು ಸ್ಥಳೀಯರೇ ಕಿಮ್ಸ್‌ಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಟ್ಟಿದ್ದಾರೆ‘ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಹುಬ್ಬಳ್ಳಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಶವಪತ್ತೆ: ಇಲ್ಲಿನ ಹೊರವಲಯದಲ್ಲಿ ರೈಲು ಹಳಿಯ ಮೇಲೆ ಶುಕ್ರವಾರ ಮಹಿಳೆ ಹಾಗೂ ಪುರುಷನ ಶವ ಪತ್ತೆಯಾಗಿದೆ. ಮೃತರ‌ ವಿವರತಿಳಿದುಬಂದಿಲ್ಲ. ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.