ADVERTISEMENT

ಹುಬ್ಬಳ್ಳಿ–ಚಿತ್ರದುರ್ಗ ರೈಲು ಸಂಚಾರ ರದ್ದು

​ಪ್ರಜಾವಾಣಿ ವಾರ್ತೆ
Published 22 ಮೇ 2021, 12:36 IST
Last Updated 22 ಮೇ 2021, 12:36 IST

ಹುಬ್ಬಳ್ಳಿ: ಬ್ಯಾಡಗಿ ಹಾಗೂ ಹಾವೇರಿ ನಡುವೆ ರೈಲ್ವೆ ಸಂಬಂಧಿತ ತಾಂತ್ರಿಕ ಕಾರ್ಯ ನಡೆಯಲಿರುವ ಕಾರಣ ಮೇ 23ರಿಂದ 28ರ ವರೆಗೆ ಹುಬ್ಬಳ್ಳಿ–ಚಿತ್ರದುರ್ಗ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಯೆಸ್‌ ಚಂಡಮಾರುತದ ಆತಂಕ ಇರುವ ಕಾರಣ ಮೇ 25ರಿಂದ ಮುಂದಿನ ಆದೇಶದ ತನಕ ಹೌರಾ–ವಾಸ್ಕೋಡಗಾಮ ಅಮರಾವತಿ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು ಎರಡೂ ಮಾರ್ಗದಿಂದ ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ ಈ ರೈಲು ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್‌ರಾಕ್‌ ಮೂಲಕ ಸಂಚರಿಸುತ್ತಿತ್ತು.

ಮೇ 25ರಿಂದ ಗುವಾಹಟಿ–ಕಾಚಿಗೂಡ–ವಾಸ್ಕೋಡಗಾಮ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಗುವಾಹಟಿಯಿಂದ ರದ್ದುಪಡಿಸಲಾಗಿದೆ. ಈ ರೈಲು ಮಡಗಾಂವ್‌, ಕುಲೇಂ, ಕ್ಯಾಸಲ್‌ರಾಕ್‌, ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ ಹಾಗೂ ಗುಂತಕಲ್‌ ಮಾರ್ಗದ ಮೂಲಕ ಸಂಚರಿಸುತ್ತಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.