ADVERTISEMENT

ಖರ್ಚಾಗದ ಅನುದಾನ: ಸಿಎಜಿಗೆ ವಿವರ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 13:29 IST
Last Updated 16 ಸೆಪ್ಟೆಂಬರ್ 2021, 13:29 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ    

ಹುಬ್ಬಳ್ಳಿ: ‘2019–2020ರ ಬಜೆಟ್‌ನಲ್ಲಿ ಖರ್ಚಾಗದ ₹29,826.44 ಕೋಟಿ ಅನುದಾನ ಮರು ಹೊಂದಾಣಿಕೆ ವಿವರವನ್ನು ಸಿಎಜಿಗೆ (ಮಹಾಲೇಖಪಾಲ) ನೀಡಲು ಹಣಕಾಸು ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಿಎಜಿ ವರದಿಯಲ್ಲಿನ ಆಕ್ಷೇಪ ಕುರಿತು ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಹಿಂದೆಯೂ ಸಿಎಜಿಯಿಂದ ಇಂತಹ ವರದಿ ಬಂದಿತ್ತು. ಹಣಕಾಸು ಇಲಾಖೆ ಎಲ್ಲಾ ವಿವರಗಳನ್ನು ಕೊಟ್ಟಿದೆ. ವರದಿ ಕುರಿತು ಮತ್ತೊಮ್ಮೆ ಪರಿಶೀಲಿಸಿ ವಿವರ ನೀಡಲಾಗುವುದು’ ಎಂದರು.

‘ಕಲಬುರ್ಗಿ ಮಹಾನಗರ ಪಾಲಿಕೆಯ ಮೇಯರ್–ಉಪ ಮೇಯರ್ ಚುನಾವಣೆಗೆ ಮೊದಲು ಅಧಿಸೂಚನೆಯಾಗಲಿ. ಆ ಕುರಿತು ಈಗಲೇ ಏನನ್ನೂ ಹೇಳಲು ಇಚ್ಛಿಸುವುದಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕುರಿತು ಸದನದಲ್ಲಿ ಉತ್ತರ ನೀಡುವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.