ADVERTISEMENT

ಅಣ್ಣಿಗೇರಿ: ಜನತಾ ಜಲಧಾರೆ ರಥಕ್ಕೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 3 ಮೇ 2022, 4:12 IST
Last Updated 3 ಮೇ 2022, 4:12 IST
ಅಣ್ಣಿಗೇರಿಗೆ ಆಗಮಿಸಿದ ಜನತಾ ಜಲಧಾರೆ ರಥವನ್ನು ಕಾರ್ಯಕರ್ತರು ಸ್ವಾಗತಿಸಿದರು
ಅಣ್ಣಿಗೇರಿಗೆ ಆಗಮಿಸಿದ ಜನತಾ ಜಲಧಾರೆ ರಥವನ್ನು ಕಾರ್ಯಕರ್ತರು ಸ್ವಾಗತಿಸಿದರು   

ಅಣ್ಣಿಗೇರಿ: ರಾಜ್ಯದಲ್ಲಿನ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಜೆಡಿಎಸ್ ಆಯೋಜಿಸಿರುವ ಜನತಾ ಜಲಧಾರೆ ಕಾರ್ಯಕ್ರಮದ ರಥ ಸೋಮವಾರ ಪಟ್ಟಣಕ್ಕೆ ಆಗಮಿಸಿತು. ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸಿದರು.

ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ನೇತೃತ್ವದಲ್ಲಿ ಹಮ್ಮಿಕೊಂಡ ಜನತಾ ಜಲಧಾರೆ ರಥಕ್ಕೆ ಜಿಲ್ಲಾಧ್ಯಕ್ಷ ಬಿ.ಬಿ.ಗಂಗಾಧರಮಠ ಚಾಲನೆ ನೀಡಿದರು. ರಾಜ್ಯದಲ್ಲಿ ನನೆಗುದಿಗೆ ಬಿದ್ದ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ಉತ್ತಮ ಆಡಳಿತ ಬೇಕಾಗಿದೆ. ಆದ್ದರಿಂದ ಈ ಬಾರಿ ಜೆಡಿಎಸ್‌ಗೆ ಪ್ರತಿಯೊಬ್ಬರೂ ಮತ ನೀಡುವ ಮೂಲಕ ಬೆಂಬಲಿಸಿ ಎಂದು ಪ್ರಕಾಶ ಅಂಗಡಿ ಮನವಿ ಮಾಡಿದರು.

ಮುಖಂಡರಾದ ಗುರುರಾಜ ಹುಣಶಿಮರದ, ಡಿ.ಎಂ.ಶಲವಡಿ, ಶ್ರೀಶೈಲಯ್ಯ ಮೂಲಿಮನಿ, ನಾರಾಯಣ ಮಾಡಳ್ಳಿ, ಬಸಮ್ಮ ಅಂಗಡಿ, ಶಿವಶಂಕರ ಕಲ್ಲೂರ, ವಿರೇಶ ಶಾನುಭೋಗರ, ವಿರೇಶ ಕುಬಸದ, ಜಿ.ಎನ್.ತೋಟದ, ಹಟೇಲಸಾಬ ಗಾಡಗೋಳಿ, ದಸಗೀರಸಾಬ ಸಂಗಟಿ, ಸಂಗಪ್ಪ ಅಂಗಡಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.