ಹುಬ್ಬಳ್ಳಿ: ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಹಾಗೂ ತಣ್ಣನೆಯ ಗಾಳಿ ಇದ್ದ ನಗರದಲ್ಲಿ ಮಧ್ಯಾಹ್ನ ಅಬ್ಬರದ ಮಳೆ ಸುರಿಯುತ್ತಿದೆ.
ವಿದ್ಯಾನಗರ, ದೇಶಪಾಂಡೆ ನಗರ, ಲಿಂಗರಾಜ ನಗರ, ನವನಗರ, ಇಸ್ಕಾನ್ ದೇವಸ್ಥಾನ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಿದೆ. ಕೆಲವೆಡೆ ಜೋರಾಗಿ ಸುರಿದರೆ, ಇನ್ನೂ ಕೆಲವೆಡೆ ಸಾಧಾರಣವಾಗಿ ಬರುತ್ತಿದೆ. ಜಿಲ್ಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಅಗತ್ಯ ಸಾಮಗ್ರಿ ಮಾರಾಟ ಹೊರತುಪಡಿಸಿ ಉಳಿದ ಯಾವ ಅಂಗಡಿಗಳು ತೆರೆದಿಲ್ಲ. ಜನರ ಓಡಾಟವೂ ಕಡಿಮೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.