ಧಾರವಾಡ: ಜಿಲ್ಲಾ ಖನಿಜ ನಿಧಿಯಿಂದ ಹಣ ಮಂಜೂರು ಮಾಡುವ ಅಥವಾ ಈ ನಿಧಿಯನ್ನು ಬೇರೆ ವೆಚ್ಚಕ್ಕೆ ಅನುಮೋದನೆ ನೀಡುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುವ ಕೇಂದ್ರದ ಕ್ರಮವನ್ನು ಕಾಂಗ್ರೆಸ್ ಮುಖಂಡ ಬಡವರಾಜ ರಾಯರಡ್ಡಿ ಸ್ವಾಗತಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗಣಿ ಗುತ್ತಿಗೆದಾರರಿಂದ ಪಡೆದ ಕಡ್ಡಾಯ ದೇಣಿಗೆಯನ್ನು ಗಣಿ ಬಾಧಿತ ಪ್ರದೇಶ ಹಾಗೂ ಜನರ ಅಭಿವೃದ್ಧಿ ಹಾಗೂ ಪುನರ್ವಸತಿ ಬಳಕೆಯಾಗಬೇಕು. ಆದರೆ ಹಾಗೆ ಆಗುತ್ತಿಲ್ಲ. ಈ ಹಣವನ್ನು ರಾಜ್ಯ ಸರ್ಕಾರ ಬೇರೆ ಖರ್ಚಿಗೆ ಬಳಸುತ್ತಿದೆ. ಹೀಗಿರುವಾಗ ಕೇಂದ್ರವು ರಾಜ್ಯದ ಅಧಿಕಾರವನ್ನು ಹಿಂಪಡೆದರೆ ತಪ್ಪೇನು?’ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಹಣ ಮಂಜೂರಾತಿಯ ರಾಜ್ಯಗಳ ಅಧಿಕಾರ ಮೊಟಕು: ಗಣಿ ನಿಧಿಗೆ ಕೇಂದ್ರದ ಕಣ್ಣು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.