ADVERTISEMENT

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಬೇಡ: ಕುಮಾರ ಹಕಾರಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 7:39 IST
Last Updated 15 ಜೂನ್ 2020, 7:39 IST

ಹುಬ್ಬಳ್ಳಿ: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಬಾರದು ಎಂದು ಕರ್ನಾಟಕ ರಾಜ್ಯ ಶಿವಸೇನಾ ಅಧ್ಯಕ್ಷ ಕುಮಾರ ಹಕಾರಿ ಆಗ್ರಹಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ತಿದ್ದುಪಡಿ ರೈತರಿಗೆ‌ ಮುಳುವಾಗಲಿದೆ. ಅದ್ದರಿಂದ ಕೈಬಿಡಬೇಕು‌ ಎಂದು ಒತ್ತಾಯಿಸಿದರು.

ಆನ್ ಲೈನ್‌ ಶಿಕ್ಷಣ ಕೈಬಿಡಬೇಕು. ಪ್ರೌಢಶಾಲೆ ಮಕ್ಕಳಿಗೆ ಆನ್ ಲೈನ್ ಪಾಠ ಮಾಡುತ್ತಿರುವುದು ಸರಿಯಲ್ಲ ಎಂದರು.

ADVERTISEMENT

ಗ್ರಾಮೀಣ‌‌ ಪ್ರದೇಶದಲ್ಲಿ ನೆಟ್ ಸಮಸ್ಯೆ ಇದೆ. ಅವರು ಹೇಗೆ ಪಾಠ ಕೇಳಬೇಕು. ಮಕ್ಕಳಿಗೆ ಮೊಬೈಲ್ ಕೊಡಿಸುವಷ್ಟು ಆರ್ಥಿಕವಾಗಿ ಸಬಲರಾಗಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.