ADVERTISEMENT

ನಾ ಏನೂ ಮಾತಾಡಲ್ಲ. ಏನ್ ಧಮ್ಕಿ ಹಾಕ್ತೀರಾ.: ಪತ್ರಕರ್ತರ ವಿರುದ್ಧ ಜಾರಕಿಹೊಳಿ ಕಿಡಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 9:47 IST
Last Updated 25 ಡಿಸೆಂಬರ್ 2018, 9:47 IST
   

ಹುಬ್ಬಳ್ಳಿ: ‘ನಾ ಏನೂ ಮಾತಾಡಲ್ಲ. ಏನ್ ಧಮ್ಕಿ ಹಾಕ್ತೀರಾ, ದಾದಾಗಿರಿ ಮಾಡ್ತೀರಾ...’ – ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ತಮ್ಮನ್ನು ಮುತ್ತಿಕೊಂಡ ಪತ್ರಕರ್ತರ ವಿರುದ್ಧ ಶಾಸಕ ರಮೇಶ ಜಾರಕಿಹೊಳಿ ಕಿಡಿಕಾರಿದ್ದು ಹೀಗೆ.

ರಮೇಶ ಅವರು ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ಹೋಗಲಿದ್ದಾರೆ ಎಂಬ ಮಾಹಿತಿ ಮೇರೆಗೆ, ಪತ್ರಕರ್ತರು ಅವರನ್ನು ಮಾತನಾಡಿಸಲು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ನಿಲ್ದಾಣದಿಂದ ಹೊರಕ್ಕೆ ಬರುತ್ತಲೇ ತಮ್ಮನ್ನು ಮುತ್ತಿಕೊಂಡು, ಪ್ರಶ್ನೆಗಳನ್ನು ಕೇಳಿದ ಪತ್ರಕರ್ತರ ವಿರುದ್ಧ ಸಿಡಿಮಿಡಿಗೊಂಡರು.

ಬಳಿಕ, ಕಾರು ಹತ್ತಿಕೊಂಡು ಬೆಳಗಾವಿಯತ್ತ ಪಯಣ ಬೆಳೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.