ADVERTISEMENT

ಸಾರಿಗೆ ಇಲಾಖೆ ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 16:28 IST
Last Updated 5 ಜುಲೈ 2019, 16:28 IST

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥೆವಾರು ಹೊಸ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಶುಕ್ರವಾರ ನೇಮಕ ಮಾಡಲಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ: ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್‌.ಸಿ. ಹಿರೇಮಠ (ಅಧ್ಯಕ್ಷ), ಹುಬ್ಬಳ್ಳಿ ಕೇಂದ್ರ ಕಚೇರಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಬಸಲಿಂಗಪ್ಪ ಬೀಡಿ (ಉಪಾಧ್ಯಕ್ಷ), ಕಾನೂನು ಅಧಿಕಾರಿ ಬಾಗಲಕೋಟೆಯ ನಾರಾಯಣಪ್ಪ ಕುರುಬರ (ಪ್ರಧಾನ ಕಾರ್ಯದರ್ಶಿ), ಬಾಗಲಕೋಟೆ ವಿಭಾಗೀಯ ಸಂಚಾರ ಅಧಿಕಾರಿ ಪಡಿಯಪ್ಪ ವಿ. ಮೇತ್ರಿ (ಖಜಾಂಚಿ).

ಚಿಕ್ಕೋಡಿ ವಿಭಾಗೀಯ ಸಂಚಾರ ಅಧಿಕಾರಿ ಶಶಿಧರ ವಿ. ಮರಿದೇವರಮಠ, ಪ್ರಾದೇಶಿಕ ಕಾರ್ಯಾಗಾರ ಕಚೇರಿಯ ಉಪಮುಖ್ಯ ಕಾರ್ಯ ವ್ಯವಸ್ಥಾಪಕ ಪ್ರವೀಣ ಇಡೂರ, ಹುಬ್ಬಳ್ಳಿ ವಿಭಾಗೀಯ ತಾಂತ್ರಿಕ ಅಧಿಕಾರಿ ಕಿರಣಕುಮಾರ ಬಸಾಪುರೆ, ಹುಬ್ಬಳ್ಳಿ ಗ್ರಾಮಾಂತರ ಘಟಕ–3ರ ವ್ಯವಸ್ಥಾಪಕ ರವೀಂದ್ರ ನಾಡಗೌಡ, ಅಥಣಿ ಘಟಕದ ವ್ಯವಸ್ಥಾಪಕ ಪಿ.ಆರ್‌. ಕಿರಣಗಿ, ಮುಂಡರಗಿ ಘಟಕದ ವ್ಯವಸ್ಥಾಪಕ ವಿಜಯಕುಮಾರ ಕುಮಠಳ್ಳಿ, ಹಾವೇರಿ ಸಹಾಯಕ ಲೆಕ್ಕಾಧಿಕಾರಿ ಸುನೀಲ ವಾಡೇಕರ ಮತ್ತು ಸಹಾಯಕ ಸಂಚಾರ ವ್ಯವಸ್ಥಾಪಕಿ ರೋಹಿಣಿ ಆರ್‌. ಬೇವಿನಕಟ್ಟಿ ನಿರ್ದೇಶಕರಾಗಿ ನೇಮಕವಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.