ADVERTISEMENT

ಮರಳು ಶಿಲ್ಪದ ಎದುರು ಸೆಲ್ಫಿ ಸ್ಪರ್ಧೆ

ಮತದಾರರಿಗೆ ಜಾಗೃತಿಗೆ ವಿನೂತನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 13:04 IST
Last Updated 11 ಏಪ್ರಿಲ್ 2019, 13:04 IST
ಕರ್ನಾಟಕ ಕಾಲೇಜು ಮಹಾಧ್ವಾರದ ಮುಂಭಾಗದಲ್ಲಿ ಕಲಾವಿದ ಮಂಜುನಾಥ ಹಿರೇಮಠ ಅವರು ಮತದಾರರ ಜಾಗೃತಿಗಾಗಿ ಮರಳಿನಲ್ಲಿ ಶಿಲ್ಪ ಕಲಾಕೃತಿ ರಚಿಸುತ್ತಿರುವ ದೃಶ್ಯ 
ಕರ್ನಾಟಕ ಕಾಲೇಜು ಮಹಾಧ್ವಾರದ ಮುಂಭಾಗದಲ್ಲಿ ಕಲಾವಿದ ಮಂಜುನಾಥ ಹಿರೇಮಠ ಅವರು ಮತದಾರರ ಜಾಗೃತಿಗಾಗಿ ಮರಳಿನಲ್ಲಿ ಶಿಲ್ಪ ಕಲಾಕೃತಿ ರಚಿಸುತ್ತಿರುವ ದೃಶ್ಯ    

ಧಾರವಾಡ: ಮತದಾರರ ಜಾಗೃತಿಗಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿ ಗುರುವಾರ ನಗರದ ಕರ್ನಾಟಕ ಕಾಲೇಜು ಮಹಾದ್ವಾರದ ಬಳಿ ನಿರ್ಮಿಸಿರುವ ಮತದಾರ ಜಾಗೃತಿ ಸಂದೇಶ ಸಾರುವ ಮರಳು ಶಿಲ್ಪ ನಿರ್ಮಿಸಿ ಆಕರ್ಷಕ ಸೆಲ್ಫಿ ತೆಗೆಸಿಕೊಳ್ಳಲು ಆಹ್ವಾನಿಸಿತ್ತು.

ವಿದ್ಯಾರ್ಥಿಗಳು, ಯುವಜನರನ್ನೂ ಸೇರಿದಂತೆ ಹಲವರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಅಧಿಕಾರಿಗಳು, ಹಿರಿಯ ನಾಗರಿಕರೂ ಶಿಲ್ಪದೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಸ್ಥಳೀಯ ಕಲಾವಿದ ಮಂಜುನಾಥ ಹಿರೇಮಠ ಹಾಗೂ ಅವರ ಪುತ್ರ ಕಾಂತೇಶ ನಿರ್ಮಿಸಿರುವ ಮರಳು ಶಿಲ್ಪ ಕಲಾಕೃತಿಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಬಿ.ಸಿ. ಸತೀಶ ಲೋಕಾರ್ಪಣೆಗೊಳಿಸಿದರು.

ADVERTISEMENT

ದೀಪಾ ಚೋಳನ್ ಅವರು ಸ್ಥಳೀಯ ಮಹಿಳೆಯರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಶ್ರೇಯಾ ಕಾಲೇಜಿನ ವಿದ್ಯಾರ್ಥಿನಿಯರು ತಮ್ಮ ಮುಖದ ಮೇಲೆ ‘ಐ ವಿಲ್ ವೋಟ್ ಆನ್ ಏ.23’ ಎಂದು ಬರೆದುಕೊಂಡು ಎಲ್ಲರ ಗಮನ ಸೆಳೆದರು.

ಶಿಕ್ಷಕರಾದ ಎಫ್.ಬಿ. ಕಣವಿ, ಕೀರ್ತಿವತಿ ಮತ್ತು ತಂಡದವರ ಚುನಾವಣಾ ಗೀತೆಗಳು ಹಾಡಿದರು. ಈ ಮರಳು ಶಿಲ್ಪ ಕರ್ನಾಟಕ ಕಾಲೇಜು ಪ್ರವೇಶ ದ್ವಾರದ ಬಳಿಯೇ ಸ್ಥಾಪಿಸಲಾಗಿದ್ದು, ಮುಂದಿನ ಮೂರು ದಿನಗಳವರೆಗೆ ಇರಲಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ, ತೋಟಗಾರಿಕೆ ಉಪನಿರ್ದೇಶಕ ಡಾ. ರಾಮಚಂದ್ರ ಮಡಿವಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಸ್ವೀಪ್ ಸಮಿತಿಯ ಕೆ.ಎಂ. ಶೇಖ್, ಡಾ. ಆರ್.ಬಿ. ಸೋನೇಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.