ADVERTISEMENT

ಸಿಂಧೂರ ಲಕ್ಷ್ಮಣ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 18 ಮೇ 2021, 15:11 IST
Last Updated 18 ಮೇ 2021, 15:11 IST
ಸಿಂಧೂರ ಲಕ್ಷ್ಮಣ ಜಯಂತಿ ಅಂಗವಾಗಿ ಸಮತಾ ಸೇನಾ ಮತ್ತ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ವತಿಯಿಂದ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಲಕ್ಷ್ಮಣ ಪ್ರತಿಮೆಗೆ ಮಂಗಳವಾರ ಮಾಲಾರ್ಪಣೆ ಮಾಡಲಾಯಿತು
ಸಿಂಧೂರ ಲಕ್ಷ್ಮಣ ಜಯಂತಿ ಅಂಗವಾಗಿ ಸಮತಾ ಸೇನಾ ಮತ್ತ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ವತಿಯಿಂದ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಲಕ್ಷ್ಮಣ ಪ್ರತಿಮೆಗೆ ಮಂಗಳವಾರ ಮಾಲಾರ್ಪಣೆ ಮಾಡಲಾಯಿತು   

ಹುಬ್ಬಳ್ಳಿ: ವೀರ ಸೇನಾನಿ ಸಿಂಧೂರ ಲಕ್ಷ್ಮಣ ಜಯಂತಿಯನ್ನು ವಿವಿಧ ಸಂಘಟನೆಗಳು ಮಂಗಳವಾರ ನಗರದಲ್ಲಿ ಸರಳವಾಗಿ ಆಚರಿಸಿದವು.

ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ಗೋಕುಲ ರಸ್ತೆಯಲ್ಲಿರುವ ಲಕ್ಷ್ಮಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ಸಮತಾ ಸೇನಾ, ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಹಾಗೂ ಪ್ರಗತಿಪರ ವೇದಿಕೆಗಳ ಪದಾಧಿಕಾರಿಗಳು ಸಹ ಸರಳವಾಗಿ ಜಯಂತಿಯನ್ನು ಆಚರಿಸಿದವು. ಲಕ್ಷ್ಮಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸ್ವಾತಂತ್ರ್ಯ ಸೇನಾನಿಯ ಸಾಹಸವನ್ನು ಕೊಂಡಾಡಿದವು.

ADVERTISEMENT

ಸೇನಾದ ಗುರುನಾಥ ಉಳ್ಳಿಕಾಶಿ, ಡಾ. ತ್ಯಾಗರಾಜ, ಡಾ, ಚೌಹಾಣ, ಪ್ರೊ.ಬಡಿಗೇರ, ಯಲ್ಲಪ್ಪ ಬಾಗಲಕೋಟಿ, ರೈಸ್ ಖೋಜೆ, ಹನಮಂತ ತಳವಾರ ಹಾಗೂ ಲೋಹಿತ ಗಾಮನಗಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.