ADVERTISEMENT

ಹುಬ್ಬಳ್ಳಿ: ರೈತರ ಹೋರಾಟಕ್ಕೆ ಸೈನಿಕನ ಬೆಂಬಲ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 6:04 IST
Last Updated 8 ಡಿಸೆಂಬರ್ 2020, 6:04 IST
ಪ್ರತಿಭಟನೆಯಲ್ಲಿ ರೈತರೊಂದಿಗೆ ಯೋಧ ರಮೇಶ
ಪ್ರತಿಭಟನೆಯಲ್ಲಿ ರೈತರೊಂದಿಗೆ ಯೋಧ ರಮೇಶ   

ಹುಬ್ಬಳ್ಳಿ: ಭಾರತ್ ಬಂದ್ ಬೆಂಬಲಿಸಿ ಕುಂದಗೋಳ ತಾಲ್ಲೂಕಿನ ಬಾರದ್ವಾಡ ಗ್ರಾಮದ ಯೋಧ ರಮೇಶ, ನಗರದ ಕಿತ್ತೂರು ರಾಣಿ‌‌‌ ಚನ್ನಮ್ಮ ವೃತ್ತದಲ್ಲಿ ಸೈನಿಕರ ಪೋಷಾಕು ಹಾಕಿಕೊಂಡೇ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ರಜೆಯ ಮೇಲೆ ಊರಿಗೆ ಬಂದಿರುವ ಅವರು ಹೆಗಲ ಮೇಲೆ ಹಸಿರು ಶಾಲು ಹೊದ್ದು, ಕೈಯಲ್ಲಿ ಬಾರುಕೋಲು ಹಿಡಿದಿದ್ದರು. ಜೈ ಜವಾನ್, ಜೈ ಕಿಸಾನ್ ಘೋಷಣೆ ಕೂಗಿದರು.

ಯೋಧನ ವಿಚಾರಣೆ ನಡೆಸಿದ ಪೊಲೀಸರು ದಾಖಲೆಗಳನ್ನು ಪರಿಶೀಲಿಸಿದರು.

ADVERTISEMENT

ಯಾವ ಸರ್ಕಾರ ಹಾಗೂ ಯಾವ ಪಕ್ಷವೂ ನನಗೆ ಸಂಬಂಧವಿಲ್ಲ. ರೈತರಿಗೆ ಬೆಂಬಲ ವ್ಯಕ್ತಪಡಿಸಲು ಮಾತ್ರ ಬಂದಿದ್ದೇನೆ ಎಂದು ರಮೇಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.