ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಕೆಲವು ಎಕ್ಸ್ಪ್ರೆಸ್ ರೈಲುಗಳ ಸಮಯ ಬದಲಾವಣೆ ಮಾಡಿದೆ.
ಕೆಎಸ್ಆರ್ ಬೆಂಗಳೂರು–ಅಜ್ಮೀರ್ ವೀಕ್ಲಿ ಎಕ್ಸ್ಪ್ರೆಸ್ (16532) ಜೂನ್ 10ರಿಂದ ಬೆಳಿಗ್ಗೆ 5.40ಕ್ಕೆ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣ ಹುಬ್ಬಳ್ಳಿ, 6.10ಕ್ಕೆ ಧಾರವಾಡ ಹಾಗೂ 8.30ಕ್ಕೆ ಬೆಳಗಾವಿಯಿಂದ ಹೊರಡಲಿದೆ.
ಕೆಎಸ್ಆರ್ ಬೆಂಗಳೂರು–ಗಾಂಧಿಧಾಮ್ ವೀಕ್ಲಿ ಎಕ್ಸ್ಪ್ರೆಸ್ (16506) ಜೂನ್ 11ರಿಂದ ಬೆಳಿಗ್ಗೆ 5.40ಕ್ಕೆ ಹುಬ್ಬಳ್ಳಿ, 6.10 ಧಾರವಾಡ ಹಾಗೂ 8.30ಕ್ಕೆ ಬೆಳಗಾವಿಯಿಂದ ಹೊರಡಲಿದೆ. ಕೆಎಸ್ಆರ್ ಬೆಂಗಳೂರು–ಜೋಧ್ಪುರ ವೀಕ್ಲಿ ಎಕ್ಸ್ಪ್ರೆಸ್ (16534) ಜೂನ್ 12ರಿಂದ ಬೆಳಿಗ್ಗೆ 5.40ಕ್ಕೆ ಹುಬ್ಬಳ್ಳಿ, 6.10ಕ್ಕೆ ಧಾರವಾಡ, 8.30ಕ್ಕೆ ಬೆಳಗಾವಿಯಿಂದ ಹೊರಡಲಿದೆ.
ಕೆಎಸ್ಆರ್ ಬೆಂಗಳೂರು–ಜೋಧ್ಪುರ ಎಕ್ಸ್ಪ್ರೆಸ್ (16508) ಜೂನ್ 13ರಿಂದ ಬೆಳಿಗ್ಗೆ 5.40ಕ್ಕೆ ಹುಬ್ಬಳ್ಳಿ, 6.10ಕ್ಕೆ ಧಾರವಾಡ, 8.30ಕ್ಕೆ ಬೆಳಗಾವಿಯಿಂದ ಹೊರಡಲಿದೆ. ಮೈಸೂರು–ಅಜ್ಮೀರ್ ಎಕ್ಸ್ಪ್ರೆಸ್ (16210) ಜೂನ್ 14ರಿಂದ 5.40ಕ್ಕೆ ಹುಬ್ಬಳ್ಳಿ, 6.10ಕ್ಕೆ ಧಾರವಾಡ, 8.30ಕ್ಕೆ ಬೆಳಗಾವಿ ಹಾಗೂ 9.30ಕ್ಕೆ ಘಟಪ್ರಭಾದಿಂದ ಹೊರಡಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.