ಹುಬ್ಬಳ್ಳಿ: ಮೈಸೂರು–ಬಾಗಲಕೋಟೆ ನಡುವೆ ಸಂಚರಿಸುವ ‘ಬಸವ ಎಕ್ಸ್ಪ್ರೆಸ್’ ರೈಲು ನವೆಂಬರ್ 10 ಮತ್ತು 11ರಂದು ಮೈಸೂರಿನಿಂದ ವಿಜಯಪುರವರಗೆ ಮಾತ್ರ ಸಂಚರಿಸಲಿದೆ.
ವಿಜಯಪುರ ಜಿಲ್ಲೆಯ ಮುಳವಾಡ–ಜುಮನಾಳ ನಿಲ್ದಾಣಗಳ ನಡುವೆ ರೈಲ್ವೆ ದ್ವಿಪಥ ಮಾರ್ಗ ಕಾಮಗಾರಿ ನಡೆಯುತ್ತಿರುವುದರಿಂದ ಈ ರೈಲು ವಿಜಯಪುರ–ಬಾಗಲಕೋಟೆ ನಡುವೆ ಸಂಚರಿಸುವುದಿಲ್ಲ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
30 ನಿಮಿಷ ವಿಳಂಬ: ಹುಬ್ಬಳ್ಳಿ–ವಿಜಯಪುರ–ಹುಬ್ಬಳ್ಳಿ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲು (ರೈಲು ಸಂಖ್ಯೆ 06919/06920) ನವೆಂಬರ್ 9ರಿಂದ 12 ವರೆಗೆ ನಿಗದಿತ ಸಮಯಕ್ಕಿಂತ 30 ನಿಮಿಷ ವಿಳಂಬವಾಗಿ ಚಲಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.