ADVERTISEMENT

6 ಲೇಖಕಿಯರಿಗೆ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 23:59 IST
Last Updated 5 ಆಗಸ್ಟ್ 2023, 23:59 IST
ಜಯಾ ರಾಜಶೇಖರ್
ಜಯಾ ರಾಜಶೇಖರ್   

ಧಾರವಾಡ: ಉತ್ತರ ಕರ್ನಾಟಕ ಲೇಖಕಿಯರ ಸಂಘವು 2021 ಹಾಗೂ 2022ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗೆ ಆರು ಲೇಖಕಿಯರನ್ನು ಆಯ್ಕೆ ಮಾಡಿದೆ.

ಸಾಹಿತ್ಯ ಸರಸ್ವತಿ ಪ್ರಶಸ್ತಿಗೆ ಜಯಾ ರಾಜಶೇಖರ್ (2021), ಶಾಂತಲಾ ಯಡ್ರಾವಿ (2022) ಹಾಗೂ ಶಾಂತಾದೇವಿ ಕಣವಿ ಕಥಾ ಪ್ರಶಸ್ತಿಗೆ ಬಾನು ಮುಷ್ತಾಕ್ (2021), ಮಧುರಾ ಕರ್ಣಂ (2022) ಅವರನ್ನು ಆಯ್ಕೆ ಮಾಡಲಾಗಿದೆ. ಲತಾ ರಾಜಶೇಖರ್ ಕಾವ್ಯ ಪ್ರಶಸ್ತಿಗೆ ‌ಸವಿತಾ ನಾಗಭೂಷಣ್ (2021), ವಿನಯಾ ಒಕ್ಕುಂದ (2022) ಅವರನ್ನು ಆಯ್ಕೆ ಮಾಡಲಾಗಿದೆ.

ಸಾಹಿತ್ಯ ಸರಸ್ವತಿ ಹಾಗೂ ಕಥಾ ಪ್ರಶಸ್ತಿಗಳು ತಲಾ ₹5 ಸಾವಿರ ನಗದು ಹಾಗೂ ಕಾವ್ಯ ಪ್ರಶಸ್ತಿ ತಲಾ ₹10 ಸಾವಿರ, ಪ್ರಶಸ್ತಿ ಪತ್ರ ಒಳಗೊಂಡಿದೆ. ಆಗಸ್ಟ್ ಕೊನೆ ವಾರದಲ್ಲಿ ಜರುಗುವ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷೆ ರಾಜೇಶ್ವರಿ ಮಹೇಶ್ವರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT
ಶಾಂತಲಾ ಯಡ್ರಾವಿ
ಬಾನು ಮುಷ್ತಾಕ್
ಮಧುರಾ ಕರ್ಣಂ
ಸವಿತಾ ನಾಗಭೂಷಣ್
ವಿನಯಾ ಒಕ್ಕುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.