ADVERTISEMENT

ವೀರಶೈವ ಲಿಂಗಾಯತರು ಸಬಲರಾಗಬೇಕು: ಪ್ರಕಾಶ ಬೆಂಡಿಗೇರಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 20:00 IST
Last Updated 1 ಡಿಸೆಂಬರ್ 2019, 20:00 IST
ವೀರಶೈವ ಲಿಂಗಾಯತ ಸಂಘಟನೆಯ ಸಭೆಯಲ್ಲಿ ಪ್ರಕಾಶ ಬೆಂಡಿಗೇರಿ ಮಾತನಾಡಿದರು
ವೀರಶೈವ ಲಿಂಗಾಯತ ಸಂಘಟನೆಯ ಸಭೆಯಲ್ಲಿ ಪ್ರಕಾಶ ಬೆಂಡಿಗೇರಿ ಮಾತನಾಡಿದರು   

ಹುಬ್ಬಳ್ಳಿ: ‘ರಾಜ್ಯದಲ್ಲೇ ಹೆಚ್ಚಿನ ಜನಸಂಖ್ಯೆ ಹೊಂದಿರುವ ವೀರಶೈವ ಲಿಂಗಾಯತ ಸಮಾಜ ಮತ್ತಷ್ಟು ಸಬಲೀಕರಣಗೊಳ್ಳಬೇಕಿದೆ’ ಎಂದು ವೀರಶೈವ ಲಿಂಗಾಯತ ಸಂಘಟನೆಯ ಪ್ರಕಾಶ ಬೆಂಡಿಗೇರಿ ಹೇಳಿದರು.

ವೀರಶೈವ ಲಿಂಗಾಯತ ಸಮಾಜದ ಸಬಲೀಕರಣ ಹಾಗೂ ಸಮಾಜದ ಮೇಲೆ ನಡೆಯುತ್ತಿರುವ ಅನ್ಯಾಯಗಳ ಕುರಿತು ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘‌ಸರಿಯಾದ ಸಂಘಟನೆ ಹಾಗೂ ಹೋರಾಟದ ಕೊರತೆಯಿಂದಾಗಿ, 100ಕ್ಕೂ ಅಧಿಕ ಉಪ ಜಾತಿಗಳನ್ನೊಳಗೊಂಡ ಸಮಾಜದ ಬೆಳವಣಿಗೆ ಕುಂಠಿತವಾಗಿದೆ’ ಎಂದರು.

‘ಸಮಾಜದ ಸರ್ವರನ್ನೂ ಸಂಘಟಿಸುವ ಮೂಲಕ, ನಮ್ಮ ಹಕ್ಕನ್ನು ಪಡೆಯಲು ಹೋರಾಡಬೇಕಾದ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ, ಸಂಘಟನೆಯು ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವ ಮೂಲಕ, ಸಬಲೀಕರಣಕ್ಕಾಗಿ ಶ್ರಮಿಸಬೇಕಿದೆ’ ಎಂದು ತಿಳಿಸಿದರು.

ADVERTISEMENT

ಸಭೆಯಲ್ಲಿ ಧರ್ಮ, ಸಾಮಾಜಿಕ, ಶೈಕ್ಷಣಿಕ, ವ್ಯಾಪಾರ, ರಾಜಕೀಯ, ಕೃಷಿ, ಸಂಘಟನೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಬಸವರಾಜ ಚನ್ನೋಜಿ, ಬಸವರಾಜ ಸುಳ್ಳದ, ನಿರ್ಮಲಾ ಹಿರೇಮಠ, ತಾರಾದೇವಿ ವಾಲಿ, ಗುರುಶಿದ್ಧ, ಸಂಶಿ, ಮಲ್ಲಿಕಾರ್ಜುನ ಸಂಶಿಮಠ, ಮಹಾಂತೆಶ ಗಿರಿಮಠ, ಪ್ರಭುರಾಜ ನವಲಗುಂದ ಮಠ, ನಿರಂಜನ ಹಿರೇಮಠ ಹಾಗೂ ರಾಜು ಓದನ್ನವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.