ADVERTISEMENT

ವಿಷ್ಣುವರ್ಧನ್‌ ಜನ್ಮದಿನ: ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 15:12 IST
Last Updated 18 ಸೆಪ್ಟೆಂಬರ್ 2020, 15:12 IST
ಹುಬ್ಬಳ್ಳಿಯಲ್ಲಿ ಶುಕ್ರವಾರ ವಿಷ್ಣುವರ್ಧನ್‌ ಜನ್ಮದಿನದ ಅಂಗವಾಗಿ ನಡೆದ ರಕ್ತದಾನ ಶಿಬಿರವನ್ನು ಸಂತೋಷ ಶೆಟ್ಟಿ ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ಶುಕ್ರವಾರ ವಿಷ್ಣುವರ್ಧನ್‌ ಜನ್ಮದಿನದ ಅಂಗವಾಗಿ ನಡೆದ ರಕ್ತದಾನ ಶಿಬಿರವನ್ನು ಸಂತೋಷ ಶೆಟ್ಟಿ ಉದ್ಘಾಟಿಸಿದರು   

ಹುಬ್ಬಳ್ಳಿ: ನಟ ದಿವಂಗತ ವಿಷ್ಣವರ್ಧನ್‌ ಜನ್ಮದಿನದ ಅಂಗವಾಗಿ ನಗರದ ಯಲ್ಲಾಪುರ ಓಣಿಯಹನುಮಂತ ದೇವರ ಗುಡಿ ಆವರಣದಲ್ಲಿ ಶುಕ್ರವಾರ ವಿಷ್ಣು ಸೇನಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ರಕ್ತದಾನ ಶಿಬಿರ ನಡೆಯಿತು.

ಉದ್ಯಮಿಸಂತೋಷ ಆರ್‌. ಶೆಟ್ಟಿ ಸಸಿಗೆ ನೀರು ಹಾಕುವ ಮೂಲಕ ಶಿಬಿರ ಉದ್ಘಾಟಿಸಿ ‘ನಟರ ಅಭಿಮಾನಿ ವರ್ಗ ಏನೆಲ್ಲಾ ಮಾಡಬಹುದು; ಅದನ್ನು ವಿಷ್ಣು ಸೇನಾಸಮಿತಿ ಮಾಡಿ ತೋರಿಸಿದೆ. ಕೋವಿಡ್‌ ಸಂಕಷ್ಟದ ಕಾಲದಲ್ಲಿ ರಕ್ತದ ಅಗತ್ಯತೆ ಹೆಚ್ಚಿದೆ. ರಕ್ತದಾನ ಆಯೋಜಿಸಿದ್ದು ಹೆಮ್ಮೆಯ ಸಂಗತಿ’ ಎಂದುಮೆಚ್ಚುಗೆ ವ್ಯಕ್ತಪಡಿಸಿದರು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷಮೃತ್ಯುಂಜಯ ಹಿರೇಮಠ, ರಾಷ್ಟ್ರೋತ್ಥಾನ ರಕ್ತಭಂಡಾರದ ದತ್ತಮೂರ್ತಿ ಕುಲಕರ್ಣಿ, ನಾದಲೋಕ ಅಧ್ಯಕ್ಷ ಆರ್‌.ಎಂ.ಗೋಗೇರಿ, ಶಂಭು ಪೂಜಾರ, ಬಸವರಾಜ ಕುಂದನಹಳ್ಳಿ, ಅನಿಲ ಪೂಜಾರ, ಶಂಕರ ಸಿದ್ಧಾಪುರ, ಮಂಜು ಸಾಮ್ರಾಟ್, ನಾಗರಾಜ ಅಂಬಿಗೇರ, ಓಂಕಾರ ಜುಂಜಣ್ಣವರ, ಕುಮಾರ, ಸುನೀಲ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.