ADVERTISEMENT

ಕುಬ್ಜರ ವಿಶ್ವ ಕ್ರೀಡಾಕೂಟ; ಜರ್ಮನಿಗೆ ತೆರಳಿದ ಭಾರತ ತಂಡ

​ಪ್ರಜಾವಾಣಿ ವಾರ್ತೆ
Published 28 ಜುಲೈ 2023, 16:01 IST
Last Updated 28 ಜುಲೈ 2023, 16:01 IST
ಕುಬ್ಜರ ವಿಶ್ವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಜರ್ಮಿನಿಗೆ ತೆರಳಲು ಶುಕ್ರವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿದ್ಧರಾಗಿರುವ ಕರ್ನಾಟಕದ ಕ್ರೀಡಾಪಟುಗಳು.  
ಕುಬ್ಜರ ವಿಶ್ವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಜರ್ಮಿನಿಗೆ ತೆರಳಲು ಶುಕ್ರವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿದ್ಧರಾಗಿರುವ ಕರ್ನಾಟಕದ ಕ್ರೀಡಾಪಟುಗಳು.     

ಹುಬ್ಬಳ್ಳಿ: ಜರ್ಮನಿಯಲ್ಲಿ ನಡೆಯಲಿರುವ ಕುಬ್ಜರ ಎಂಟನೇ ವಿಶ್ವ ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತ ತಂಡ ಶುಕ್ರವಾರ ಪ್ರಯಾಣ ಬೆಳೆಸಿತು. 

ಕರ್ನಾಟಕದ ಎಂಟು ಸೇರಿದಂತೆ 18 ಕ್ರೀಡಾಪಟುಗಳು ಭಾರತ ತಂಡದಲ್ಲಿದ್ದಾರೆ. ರಾಜ್ಯದ ಆಟಗಾರರು ಬೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿ, ಅಲ್ಲಿಂದ ಇನ್ನುಳಿದ ರಾಷ್ಟ್ರೀಯ ತಂಡದ ಆಟಗಾರರ ಜೊತೆಗೂಡಿ ಜರ್ಮಿನಿಗೆ ಪ್ರಯಾಣ ಬೆಳೆಸಿದರು. ಆಗಸ್ಟ್ 5 ರವರೆಗೆ ಕ್ರೀಡಾಕೂಟ ನಡೆಯಲಿದೆ.

'ವೀಸಾ ಸಮಸ್ಯೆಯಿಂದಾಗಿ ತಡವಾಗಿ ಜರ್ಮನಿ ತಲುಪಿದೆವು. ಇದರಿಂದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಶನಿವಾರದಿಂದ ಸ್ಪರ್ಧೆಗಳು ಆರಂಭವಾಗಲಿವೆ' ಭಾರತ ತಂಡದ ವ್ಯವಸ್ಥಾಪಕ ಶಿವಾನಂದ ಗುಂಜಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಕರ್ನಾಟಕದ ಕ್ರೀಡಾಪಟುಗಳು: ದೇವಪ್ಪ ಮೋರೆ (ಧಾರವಾಡ ಜಿಲ್ಲೆ), ನಾಗೇಶ ಕದ್ರಿಪುರ (ಕೋಲಾರ ಜಿಲ್ಲೆ), ಪ್ರಕಾಶ್‌ ಎಂ. (ಬೆಂಗಳೂರು), ಮಂಜುಳಾ ಗೊರಗುದ್ದಿ ಚಿಕ್ಕನಂದಿ (ಬೆಳಗಾವಿ ಜಿಲ್ಲೆ), ಮಧುಸೂದನ ಡಿ. (ಮೈಸೂರು), ತುಳಸಿದರ ಜಿ.ಎಚ್‌. (ಬೆಂಗಳೂರು), ಶಾಂತಕುಮಾರ್‌ ಕೆ.ಆರ್.ಕೊಳ್ಳಂಗಿ (ಹಾಸನ ಜಿಲ್ಲೆ) ಮತ್ತು ಸಿ.ವಿ.ರಾಜಣ್ಣ (ಬೆಂಗಳೂರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.