ADVERTISEMENT

ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ: ಒಬ್ಬ ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 20:06 IST
Last Updated 24 ಜುಲೈ 2022, 20:06 IST
ಹರಪನಹಳ್ಳಿ ಸಮೀಪದ ಬೆಂಡಿಗೇರಿ ರಸ್ತೆಯ ಕಣವಿ ಬಳಿ ಪಲ್ಟಿಯಾದ ಡೀಸೆಲ್ ಟ್ಯಾಂಕರ್‌ ಹೊತ್ತಿ ಉರಿಯಿತು
ಹರಪನಹಳ್ಳಿ ಸಮೀಪದ ಬೆಂಡಿಗೇರಿ ರಸ್ತೆಯ ಕಣವಿ ಬಳಿ ಪಲ್ಟಿಯಾದ ಡೀಸೆಲ್ ಟ್ಯಾಂಕರ್‌ ಹೊತ್ತಿ ಉರಿಯಿತು   

ಹರಪನಹಳ್ಳಿ (ವಿಜಯನಗರ ಜಿಲ್ಲೆ ): ಪಟ್ಟಣದ ಸಮೀಪದ ಬೆಂಡಿಗೇರಿ ರಸ್ತೆಯ ಕಣವಿ ಬಳಿ ಭಾನುವಾರ ಡೀಸೆಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಟ್ಯಾಂಕರ್ ಹಿಂದೆ ಬರುತ್ತಿದ್ದ ಬೈಕ್ ಸವಾರ ಸಜೀವವಾಗಿ ದಹನವಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೋರಿಗೇರಿ ನಾಗರಾಜ್ (33) ಮೃತಪಟ್ಟವರು. ಲಾರಿ ಚಾಲಕ ಮಹಾದೇವಪ್ಪ ಮತ್ತು ಬೈಕ್‌ನ ಹಿಂಬದಿ ಸವಾರ ಚಂದ್ರು ಗಾಯಗೊಂಡಿದ್ದಾರೆ. ಚಂದ್ರು ಅವರ ಸ್ಥಿತಿ ಗಂಭೀರವಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹರಪನಹಳ್ಳಿ ಕಡೆಗೆ ಬರುತ್ತಿದ್ದ ಟ್ಯಾಂಕರ್ ಗುಡ್ಡದ ಇಳಿಜಾರಿನ ತಿರುವಿನಲ್ಲಿ ಪಲ್ಟಿಯಾಗಿದೆ. ಆಗ ಡೀಸೆಲ್‌ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಟ್ಯಾಂಕರ್ ಹಿಂದೆ ಬರುತ್ತಿದ್ದ ನಾಗರಾಜ್ ಅವರಿಗೆ ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT