ಗದಗ: ಇಲ್ಲಿನ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ರಾತ್ರಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನುಡಿಸಿರಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಮೂರೂವರೆ ಗಂಟೆಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೇರಳದ ಮೋಹಿನಿಯಾಟ್ಟಂ, ಗಣೇಶ ಸ್ತುತಿ, ಬಡಗುತ್ತಿಟ್ಟು ಯಕ್ಷಗಾನ–ಶ್ರೀರಾಮ ಪಟ್ಟಾಭಿಷೇಕ, ಆಂಧ್ರಪ್ರದೇಶದ ಜನಪದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಶಾಸ್ತ್ರೀಯ ನೃತ್ಯ- ಭೋ ಶಂಭೋ, ಮಣಿಪುರಿ ದೋಲ್ ಚಲಂ, ಕಥಕ್ ನೃತ್ಯ- ಚಾಲ್ ಪ್ರಹಾರ್, ಒರಿಸ್ಸಾದ ಗೋಟಿಪುವ ನೃತ್ಯ, ಮಲ್ಲಕಂಬ, ಮಹಾರಾಷ್ಟ್ರದ ಲಾವಣಿ ನೃತ್ಯ, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಪಶ್ಚಿಮ ಬಂಗಾಳ ಪುರುಲಿಯ ಸಿಂಹ ನೃತ್ಯ, ತೆಂಕು ಯಕ್ಷ ಪ್ರಯೋಗ–ಅಗ್ರ ಪೂಜೆ ಹಾಗೂ ವಿವಿಧ ನೃತ್ಯ ಪ್ರಕಾರಗಳು ಅನಾವರಣಗೊಂಡವು.
ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ನುಡಿಸಿರಿ ಉದ್ಘಾಟಿಸಿರು. ‘ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸುಗಳನ್ನು ಬೆಸೆಯುತ್ತವೆ. ಡಾ.ಮೋಹನ ಆಳ್ವಾ ಅವರು ಕನ್ನಡ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡುತ್ತಿರುವುದು ಒಳ್ಳೆಯ ಕಾರ್ಯವಾಗಿದೆ’ ಎಂದರು.
‘ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕು. ಇದಕ್ಕಾಗಿ ಸಂಸ್ಥೆಯಲ್ಲಿ 7 ಸಾವಿರ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಉಚಿತಶಿಕ್ಷಣ ನೀಡಲಾಗುತ್ತಿದೆ. ಇದಕ್ಕಾಗಿ ವಾರ್ಷಿಕ ₹6 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದು ಆಳ್ವಾಸ್ ಸಂಸ್ಥೆಯ ಡಾ.ಮೋಹನ ಆಳ್ವಾ ಹೇಳಿದರು. ಚಂದ್ರು ಬಾಳಿಹಳ್ಳಿಮಠ, ಬಸಣ್ಣ ಮಲ್ಲಾಡದ, ಅಂದಾನಪ್ಪ ಪಟ್ಟಣಶೆಟ್ಟಿ, ಜಯದೇವ ಭಟ್, ಈಶ್ವರಸಾ ಮೇರವಾಡೆ, ಸುಧಾಕರಶೆಟ್ಟಿ, ರಾಜು ಶೆಟ್ಟಿ, ನಾಗರಾಜ ಶೆಟ್ಟಿ, ನಿತಿನ ಜೈನ್, ವಿಜಯಕುಮಾರ ಕೇಶಿ, ನಾಗರಾಜ ಶೆಟ್ಟಿ, ಎ.ಎಸ್.ಮಕಾನದಾರ,
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.