ADVERTISEMENT

‘ನೀರಿನ ಸಂರಕ್ಷಣೆಗೆ ಹೋರಾಟ ಅಗತ್ಯ’

​ಪ್ರಜಾವಾಣಿ ವಾರ್ತೆ
Published 24 ಮೇ 2014, 6:35 IST
Last Updated 24 ಮೇ 2014, 6:35 IST
‘ನೀರಿನ ಸಂರಕ್ಷಣೆಗೆ ಹೋರಾಟ ಅಗತ್ಯ’
‘ನೀರಿನ ಸಂರಕ್ಷಣೆಗೆ ಹೋರಾಟ ಅಗತ್ಯ’   

ಹುಲಕೋಟಿ: ‘ನೀರು ರೈತರ ಜೀವನಾಡಿ ಯಾಗಿದ್ದು ಅದರ ಸಂರಕ್ಷಣೆಗಾಗಿ ಸಂಘಟಿತರಾಗಿ ಹೋರಾಟ ಮಾಡ ಬೇಕು. ಮಳೆ ನೀರನ್ನು ಹೊಲಗಳಲ್ಲಿ ಇಂಗಿಸುವತ್ತ ರೈತರು ಹೆಚ್ಚಿನ ಗಮನ ಹರಿಸಬೇಕು’ ಎಂದು ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ರಾಜಸ್ಥಾನದ  ಡಾ. ರಾಜೇಂದ್ರಸಿಂಗ್ ಹೇಳಿದರು.

ಧಾರವಾಡ  ಕೃಷಿ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ ಪದವಿ ನೀಡಿದ ಹಿನ್ನಲೆಯಲ್ಲಿ ಇಲ್ಲಿನ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ನಡೆದ ಅಭಿನಂ ದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರೈತ ಸಮುದಾಯದ ಸಂಘಟನೆ ಮುಖಾಂ ತರ ರಾಜಸ್ತಾನದ ಅಳ್ವಾರ, ಜಯಪುರ, ಜಸಲ್ಮೇರ್ ಜಿಲ್ಲೆಗಳಲ್ಲಿ 1050 ಗ್ರಾಮಗಳಲ್ಲಿ ಏಳು ನದಿ ಪಾತ್ರಗಳಲ್ಲಿ ಸುಮಾರು 11 ಸಾವಿರ ಕೆರೆಗಳು ಕಟ್ಟಲಾಗಿದೆ. ಇದರಿಂದ  ಅಂತರ್ಜಲ ಪುನಶ್ಚೇತನಗೊಂಡು ಆ  ಗ್ರಾಮಗಳ ಆರ್ಥಿಕ, ಭೌತಿಕ ಹಾಗೂ ಸಾಮಾಜಿಕ ಪರಿವರ್ತನೆ ಆಗಿದೆ ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ  ಡಿ.ಆರ್. ಪಾಟೀಲ ಮಾತನಾಡಿ, ಆರು ವರ್ಷಗಳ ಹಿಂದೆ ರಾಜೇಂದ್ರಸಿಂಗ್ ಅವರ ಮಾರ್ಗ ದರ್ಶನದಲ್ಲಿ  ತಾಲ್ಲೂಕಿನ ಈಚಲ ಹಳ್ಳದ ಜಲಾನಯನ ಪ್ರದೇಶದಲ್ಲಿ ಮಳೆ ನೀರು ಕೊಯ್ಲು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರಿಂದ ಅಂತರ್ಜಲ ಹೆಚ್ಚಿದ್ದು, ಹಳ್ಳದ ಪಾತ್ರದಲ್ಲಿ ಕೆರೆ, ಬಾವಿ ಹಾಗೂ ಕೊಳುವೆಬಾವಿಗಳು ಪುನಶ್ಚೇತನ ಗೊಂಡವೆ. ಇಂತಹ ಕಾರ್ಯಕ್ರಮ ಗಳನ್ನು ಸಂಘಟನೆಗಳ ಮುಖಾಂತರ ಇತರೆ ಪ್ರದೇಶಗಳಿಗೆ ವಿಸ್ತರಿಸುವ ಅಗತ್ಯತೆ ಇದೆ ಎಂದು ಹೇಳಿದರು.

ಜೆ.ಕೆ. ಜಮಾದಾರ, ಶಾಸಕ ಬಿ. ಆರ್. ಯಾವಗಲ್ ಮಾತನಾಡಿದರು. ರಾಮಕೃಷ್ಣ-ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅಗ್ರಿಕಲ್ಚರಲ್ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಸಿ.ಜಿ. ಕೊರವ ನವರ ಅಧ್ಯಕ್ಷತೆ ವಹಿಸಿದ್ದರು. 500 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.