ADVERTISEMENT

ಗಾಳಿ: ಧರೆಗುರುಳಿದ ಕಬ್ಬು

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 16:03 IST
Last Updated 10 ಜೂನ್ 2025, 16:03 IST
ಮುಂಡರಗಿ ತಾಲ್ಲೂಕಿನ ಕಕ್ಕೂರು ಗ್ರಾಮದಲ್ಲಿ ಬೀಸಿದ ಗಾಳಿಯಿಂದಾಗಿ ಸಂಪೂರ್ಣವಾಗಿ ಧರೆಗುರುಳಿರುವ ಕಬ್ಬು ಬೆಳೆ
ಮುಂಡರಗಿ ತಾಲ್ಲೂಕಿನ ಕಕ್ಕೂರು ಗ್ರಾಮದಲ್ಲಿ ಬೀಸಿದ ಗಾಳಿಯಿಂದಾಗಿ ಸಂಪೂರ್ಣವಾಗಿ ಧರೆಗುರುಳಿರುವ ಕಬ್ಬು ಬೆಳೆ   

ಮುಂಡರಗಿ: ತಾಲ್ಲೂಕಿನ ಕಕ್ಕೂರು ಹಾಗೂ ಮತ್ತಿತರ ಭಾಗಗಳಲ್ಲಿ ಮಂಗಳವಾರ ಸಂಜೆ ನಾಲ್ಕು ಗಂಟೆಗೆ ಆರಂಭವಾದ ಗಾಳಿಯು ಗಂಟೆಗೂ ಹೆಚ್ಚುಕಾಲ ಬೀಸಿತು. ಇದರಿಂದ ರೈತರ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಧರೆಗುರುಳಿದೆ.

‘ಬೀಸಿದ ಗಾಳಿಗೆ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣವಾಗಿ ಧರೆಗುರುಳಿದೆ. ಸಕ್ಕರೆ ಕಾರ್ಖಾನೆಯವರು ಧರೆಗುರುಳಿದ ಕಬ್ಬನ್ನು ಬೀಜಕ್ಕಾಗಿ ಖರೀದಿಸಿದರೆ ನಾನು ಮಾಡಿರುವ ಖರ್ಚಾದರೂ ಉಳಿಯುತ್ತದೆ’ ಎಂದು ಕಕ್ಕೂರು ಗ್ರಾಮದ ರೈತ ರಂಗನಾಥ ನಿಟ್ಟಾಲಿ ಮನವಿ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT