ADVERTISEMENT

‌ಗದಗದ ರಾಜಪುರೋಹಿತ ಪ್ರತಿಷ್ಠಾನ ನೀಡುವ ಪ್ರಶಸ್ತಿಗೆ ವಸುಧೇಂದ್ರ, ತೆಲಗಾವಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 9:34 IST
Last Updated 7 ಅಕ್ಟೋಬರ್ 2021, 9:34 IST
ವಸುಧೇಂದ್ರ ಮತ್ತು ಪ್ರೊ. ಲಕ್ಷ್ಮಣ ತೆಲಗಾವಿ
ವಸುಧೇಂದ್ರ ಮತ್ತು ಪ್ರೊ. ಲಕ್ಷ್ಮಣ ತೆಲಗಾವಿ   

‌ಗದಗ: ಹಾವೇರಿಯ ಗಳಗನಾಥ ಮತ್ತು ರಾಜಪುರೋಹಿತ ಪ್ರತಿಷ್ಠಾನ ನೀಡುವ ‘ಗಳಗನಾಥ ಪ್ರಶಸ್ತಿ’ಗೆ ಲೇಖಕ ವಸುಧೇಂದ್ರ ಹಾಗೂ ‘ರಾಜಪುರೋಹಿತ ಸಂಶೋಧಕ ಪ್ರಶಸ್ತಿ’ಗೆ ಪ್ರೊ. ಲಕ್ಷ್ಮಣ ತೆಲಗಾವಿ ಆಯ್ಕೆಯಾಗಿದ್ದಾರೆ.

ಗದಗ ನಗರದ ಎಂಪಿಎಂಸಿ ಆವರಣದಲ್ಲಿರುವ ಕೆ.ಎಚ್‌.ಪಾಟೀಲ ಸಭಾಭವನದಲ್ಲಿ ಅ.10ರಂದು ಸಂಜೆ 4.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಶಸ್ತಿಯು ₹50 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ ಎಂದು ಗಳಗನಾಥ ಮತ್ತು ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ದುಷ್ಯಂತ ನಾಡಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT