ADVERTISEMENT

‘ಭೀಮಸೇನ್ ಸುರತಾಲ್’ ರಾಷ್ಟ್ರೀಯ ಪ್ರಶಸ್ತಿಗೆ ಕೈವಲ್ಯಕುಮಾರ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 11:14 IST
Last Updated 17 ಜನವರಿ 2020, 11:14 IST
ಕೈವಲ್ಯಕುಮಾರ್‌ ಗುರವ್‌
ಕೈವಲ್ಯಕುಮಾರ್‌ ಗುರವ್‌   

ಗದಗ: ಇಲ್ಲಿನ ‘ಭಾರತ ರತ್ನ ಭೀಮಸೇನ್ ಜೋಶಿ ಪ್ರತಿಷ್ಠಾನ’ವು ಪ್ರಸಕ್ತ ವರ್ಷ ಕೊಡಮಾಡುವ ‘ಭೀಮಸೇನ್ ಸುರತಾಲ್’ ರಾಷ್ಟ್ರೀಯ ಪ್ರಶಸ್ತಿಗೆ ಅಂತರರಾಷ್ಟ್ರೀಯ ಗಾಯಕ ಪಂಡಿತ ಕೈವಲ್ಯಕುಮಾರ್‌ ಗುರವ್‌ ಆಯ್ಕೆಯಾಗಿದ್ದಾರೆ.

ಭೀಮಸೇನ್‌ ಜೋಶಿ ಅವರ ಪುಣ್ಯತಿಥಿಯಂದು ನಡೆಯುವ ‘ಸ್ವರ ನಮನ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ₹25 ಸಾವಿರ ನಗದು ಪ್ರಶಸ್ತಿ ಫಲಕ ಹಾಗೂ ಗೌರವ ಪುರಸ್ಕಾರ ನೀಡಲಾಗುವುದು ಎಂದು ಪ್ರತಿಷ್ಠಾನವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT