ADVERTISEMENT

ಯಾರು ಹೋದರೂ, ಬಂದರೂ ಕಾಂಗ್ರೆಸ್‌ ಸಮುದ್ರ ಉಕ್ಕಲ್ಲ– ಇಳಿಯಲ್ಲ: ಎಚ್.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 16:03 IST
Last Updated 26 ಜನವರಿ 2024, 16:03 IST
<div class="paragraphs"><p>ಎಚ್.ಕೆ.ಪಾಟೀಲ</p></div>

ಎಚ್.ಕೆ.ಪಾಟೀಲ

   

ಗದಗ: ‘ಕಾಂಗ್ರೆಸ್‌ ಸಮುದ್ರ ಇದ್ದಂತೆ. ಜಗದೀಶ ಶೆಟ್ಟರ್‌ ಬಂದರೆಂದು ಉಕ್ಕಲಿಲ್ಲ. ಅವರು ವಾಪಸ್‌ ಹೋದರೆಂದು ಕಡಿಮೆ ಆಗಲಿಲ್ಲ’ ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

‘ಶೆಟ್ಟರ್‌ ಜೆಂಟಲ್‌ಮ್ಯಾನ್‌ ಎಂದು ಭಾವಿಸಿ ಪಕ್ಷಕ್ಕೆ ಸ್ವಾಗತಿಸಿದ್ದೆವು. ಆದರೆ, ಈಗ ಅವರು ಪಕ್ಷ ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್‌ಗೆ ಅದು ಚಿಂತೆ ಮಾಡುವ ವಿಷಯ ಅಲ್ಲ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ತತ್ವ ಸಿದ್ಧಾಂತ, ಜನಪರ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್‌ ಸಂಘಟನೆಗೆ ಶಕ್ತಿ ತುಂಬುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ಕ್ರಾಂತಿಕಾರಕ ಬದಲಾವಣೆ ತಂದಿದೆ. ಯಾರೋ ಒಬ್ಬರು ಹೋದರು ಅಂತ ಕಾಂಗ್ರೆಸ್‌ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ತಿಳಿಸಿದರು.

ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ಬಿಜೆಪಿ ಸೇರ್ಪಡೆ ಸಾಧ್ಯತೆ ವಿಚಾರ ಮಾತನಾಡಿದ ಅವರು, ‘ಶಾಸಕ ಲಕ್ಷ್ಮಣ ಸವದಿ ನಾನು ಅರಿತಿರುವಂತೆ ಜೆಂಟಲ್‌ಮ್ಯಾನ್‌. ಸವದಿ ಅವರಿಗೆ ಬಿಜೆಪಿಯಲ್ಲಿ ಅವಮಾನ, ನಿರಾಸೆಯಾಗಿದೆ. ಅವರು ಪಕ್ಷ ಬಿಡುವ ಆಲೋಚನೆ ಮಾಡುವುದಿಲ್ಲ ಎಂಬ ವಿಶ್ವಾಸ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.