ADVERTISEMENT

ಸುರಕೋಡ: 15 ಕುರಿಮರಿ ಕೊಂದ ತೋಳದ ಹಿಂಡು

​ಪ್ರಜಾವಾಣಿ ವಾರ್ತೆ
Published 16 ಜೂನ್ 2023, 5:59 IST
Last Updated 16 ಜೂನ್ 2023, 5:59 IST

ನರಗುಂದ: ತಾಲ್ಲೂಕಿನ ಸುರಕೋಡ ಗ್ರಾಮದ ಕಲ್ಲಪ್ಪ ಹನಮಂತಪ್ಪ ಮಜ್ಜಗಿ ಅವರು ಜಮೀನಿನಲ್ಲಿ ಹಾಕಿದ್ದ ಕುರಿ ದೊಡ್ಡಿಗೆ ತೋಳದ ಹಿಂಡು ನುಗ್ಗಿ 15 ಕುರಿ ಮರಿಗಳನ್ನು ಕೊಂದು ಹಾಕಿದ ಘಟನೆ ಗುರುವಾರ ನಡೆದಿದೆ.

ಕಲ್ಲಪ್ಪ ಮಜ್ಜಗಿ ಅವರು ನೂರು ಮೇಕೆ ಹಾಗೂ ಕುರಿಗಳನ್ನು ಸಾಕಿದ್ದು, ಈಚೆಗೆ 19 ಕುರಿಮರಿಗಳು ಜನಿಸಿದ್ದವು. ಅವರು ಅವುಗಳನ್ನು ದೊಡ್ಡಿಯಲ್ಲಿ ಕೂಡಿ ಹಾಕಿ ಊಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದರಿಂದ ಅಂದಾಜು ₹1 ಲಕ್ಷ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.