ADVERTISEMENT

ಲವ್‌ ಜಿಹಾದ್‌ಗೆ ಬಲಿಯಾಗದಂತೆ ಯುವತಿಯರಿಗೆ ಪ್ರಮಾಣ ವಚನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 16:19 IST
Last Updated 14 ಸೆಪ್ಟೆಂಬರ್ 2024, 16:19 IST
ಲವ್‌ ಜಿಹಾದ್‌ ಬಲಿಯಾಗದಂತೆ ಹಿಂದೂ ಯುವತಿಯರು, ಪೋಷಕರಿಗೆ ಪ್ರಮಾಣವಚನ ಬೋಧಿಸಲಾಯಿತು
ಲವ್‌ ಜಿಹಾದ್‌ ಬಲಿಯಾಗದಂತೆ ಹಿಂದೂ ಯುವತಿಯರು, ಪೋಷಕರಿಗೆ ಪ್ರಮಾಣವಚನ ಬೋಧಿಸಲಾಯಿತು   

ಗದಗ: ಅವಳಿ ನಗರದ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಬಾಬು ಬಾಕಳೆ ಕ್ರಾಂತಿ ಸೇನಾ ವತಿಯಿಂದ ಲವ್ ಜಿಹಾದ್‌ಗೆ ಬಲಿಯಾಗದಂತೆ ಹಿಂದೂ ಸಮಾಜದ ಯುವತಿಯರಿಗೆ ಶ್ರೀರಾಮಚಂದ್ರ ಹಾಗೂ ಗಣಪತಿ ಮೇಲೆ ಶನಿವಾರ ಸಾಮೂಹಿಕವಾಗಿ ಪ್ರಮಾಣವಚನ ಮಾಡಿಸಿ ಜಾಗೃತಿ ಮೂಡಿಸಲಾಯಿತು.

ಕ್ರಾಂತಿ ಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಬಾಬು ಬಾಕಳೆ ಮಾತನಾಡಿ, ‘ದೇಶದಲ್ಲಿ ಸಾಕಷ್ಟು ಹಿಂದೂ ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗಿ ಜೀವನ ಹಾಳು ಮಾಡಿಕೊಂಡ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಆದಕಾರಣ, ಯುವತಿಯರು ಲವ್ ಜಿಹಾದ್‌ಗೆ ಕಡಿವಾಣ ಹಾಕಿ, ತಡೆಯುವಂತಹ ಪ್ರಯತ್ನವನ್ನೂ ಮಾಡಬೇಕು’ ಎಂದು ಹೇಳಿದರು.

ಚಿಂತಕಿ ಹರಿಕಾ ಮಂಜನಾಥ ಮಾತನಾಡಿ, ‘ಹಿಂದೂ ಸಮಾಜ ಜಾಗೃತವಾಗಬೇಕು. ಪ್ರತಿಯೊಬ್ಬ ಪೋಷಕರು ಸನಾತನ ಹಿಂದೂ ಧರ್ಮದ ಸಂಸ್ಕೃತಿ, ಸಂಸ್ಕಾರವನ್ನು ಮಕ್ಕಳಿಗೆ ಕಲಿಸಬೇಕು’ ಎಂದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.