ADVERTISEMENT

ಮುಳಗುಂದ: ದಿಂಡಿ ಸೋಹಳಾ ನಗರ ಪ್ರದಕ್ಷಿಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 3:29 IST
Last Updated 16 ಜನವರಿ 2026, 3:29 IST
ಮುಳಗುಂದ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀಗುರು ನಿವೃತ್ತಿನಾಥ ಮಹಾರಾಜರ ಸಮಾಧಿ ಸೋಹಳಾ ನಿಮಿತ್ಯ ಗುಲಾಲ ಭಜನೆಯೊಂದಿಗೆ ಪಟ್ಟಣದಲ್ಲಿ ದಿಂಡಿ ಸೋಹಳಾ ನಗರ ಪ್ರದಕ್ಷಿಣೆ ನಡೆಯಿತು. ಸಂತ ಮಂಡಳಿ ಹಾಗೂ ಮಹಿಳೆಯರು ಇದ್ದರು.
ಮುಳಗುಂದ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀಗುರು ನಿವೃತ್ತಿನಾಥ ಮಹಾರಾಜರ ಸಮಾಧಿ ಸೋಹಳಾ ನಿಮಿತ್ಯ ಗುಲಾಲ ಭಜನೆಯೊಂದಿಗೆ ಪಟ್ಟಣದಲ್ಲಿ ದಿಂಡಿ ಸೋಹಳಾ ನಗರ ಪ್ರದಕ್ಷಿಣೆ ನಡೆಯಿತು. ಸಂತ ಮಂಡಳಿ ಹಾಗೂ ಮಹಿಳೆಯರು ಇದ್ದರು.   

ಮುಳಗುಂದ : ಇಲ್ಲಿನ ಭಾವಸಾರ ಕ್ಷತ್ರಿಯ ಸಮಾಜದ ಶ್ರೀಮುರಳಿಧರ ಹರಿ ಮಂದಿರದಲ್ಲಿ ಶ್ರೀಗುರು ನಿವೃತ್ತಿನಾಥ ಮಹಾರಾಜರ ಸಮಾಧಿ ಸೋಹಳಾ ನಿಮಿತ್ತ ಗುಲಾಲ ಭಜನೆಯೊಂದಿಗೆ ದಿಂಡಿ ಸೋಹಳಾ ನಗರ ಪ್ರದಕ್ಷಿಣೆ ಗುರುವಾರ ನಡೆಯಿತು.

ಕಳೆದ ಮೂರು ದಿನಗಳಿಂದ ಮಂದಿರದಲ್ಲಿ ದಿಂಡಿ ಉತ್ಸವದ ಅಂಗವಾಗಿ ಗ್ರಂಥಜ್ಞಾನೇಶ್ವರಿ ಪೋತಿ ಸ್ಥಾಪನೆ, ಗ್ರಂಥ ಪಾರಾಯಣ, ಸಾಮೂಹಿಕ ನಾಮಜಪ, ಪ್ರವಚನ, ಗುರು ನಿವೃತ್ತಿನಾಥ ಮಹಾರಾಜರ ಕೀರ್ತನೆ, ಸಂತ ಮಂಡಳಿಯವರಿಂದ ಸಂಗೀತ ಭಜನೆ ಕಾರ್ಯಕ್ರಮ ನಡೆದವು. ಪಂಢರಾಪೂರದ ಬೋದಲೆ ಮಹಾರಾಜರು ಉತ್ಸವದ ನೇತೃತ್ವ ವಹಿಸಿದ್ದರು. ಭಾವಸಾರ ಕ್ಷತ್ರಿಯ ಸಮಾಜದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.