ADVERTISEMENT

ನರಗುಂದ: ತಾಲ್ಲೂಕಿನಾದ್ಯಂತ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 14:18 IST
Last Updated 8 ಏಪ್ರಿಲ್ 2021, 14:18 IST
   

ನರಗುಂದ (ಗದಗ): ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ಸಂಜೆ ಜೋರು ಮಳೆ ಸುರಿಯಿತು. ಬಿಸಿಲಿನಿಂದ ಬಸವಳಿದಿದ್ದ ಜನತೆಗೆ ಗುಡುಗು, ಜೋರು ಗಾಳಿ ಸಹಿತ ಸುರಿದ ಅಕಾಲಿಕ ಮಳೆ ತಂಪೆರೆಯಿತು.

ಹಿಂಗಾರು ಸುಗ್ಗಿ ಇನ್ನು ಸಂಪೂರ್ಣ ಮುಗಿಯದ ಕಾರಣ ರೈತರು ಮಳೆಯಿಂದ ಸೂರ್ಯಕಾಂತಿ, ಶೇಂಗಾ ರಕ್ಷಿಸಿಕೊಳ್ಳಲು ಹರಸಾಹಸ ಪಟ್ಟರು. ಅಲ್ಲಲ್ಲಿ ಮೇವು, ಹೊಟ್ಟಿನ ಬಣವಿ ಸಂಗ್ರಹ ಜೋರಾಗಿ ನಡೆಯುತ್ತಿದ್ದು ಈ ಮಳೆ ರೈತರಿಗೆ ಆತಂಕ ಉಂಟು ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT