ಗದಗ:ನಗರದ ಸೋಮೇಶ್ವರ ದೇವಸ್ಥಾನದ ಆವರಣ ಗೋಡೆ ಮೇಲೆ ಕಿಡಿಗೇಡಿಗಳು ‘ಎಂಐಎಂ’ ಎಂದು ಬರೆದಿದ್ದು, ತಪ್ಪಿತಸ್ಥರನ್ನು ಬಂಧಿಸಿ, ಶಿಕ್ಷಿಸಬೇಕು ಎಂದು ಶ್ರೀರಾಮಸೇನೆಯ ಧಾರವಾಡ ವಿಭಾಗದ ಸಂಘಟನಾ ಕಾರ್ಯದರ್ಶಿ ರಾಜು ಖಾನಾಪುರ ಆಗ್ರಹಿಸಿದ್ದಾರೆ. ಸೋಮೇಶ್ವರ ದೇವಸ್ಥಾನ ಕಾಂಪೌಂಡ್ ಅಷ್ಟೇ ಅಲ್ಲದೇ ನೀರಿನ ಟ್ಯಾಂಕ್, ಹಿಟ್ಟಿನ ಗಿರಣಿ, ಓಣಿಯಲ್ಲಿರುವ ಮನೆ ಬಾಗಿಲುಗಳ ಮೇಲೂ ‘ಎಂಐಎಂ’ ಎಂದು ಬರೆದಿದ್ದಾರೆ. ಊರ ಹೊರಗೆ ಇರುವ ಸೇತುವೆ ಮೇಲೂ ಈ ರೀತಿಯ ಬರಹ ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.