ADVERTISEMENT

₹3.24 ಲಕ್ಷ ಮೌಲ್ಯದ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 8:03 IST
Last Updated 3 ಅಕ್ಟೋಬರ್ 2020, 8:03 IST
ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ ಹೋಬಳಿಯ ಚಾಕೇನಹಳ್ಳಿ ಗ್ರಾಮದ ತಿಮ್ಮೇಗೌಡರ ಮಗ ಪ್ರಕಾಶ ಎಂಬುವರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದರು.
ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ ಹೋಬಳಿಯ ಚಾಕೇನಹಳ್ಳಿ ಗ್ರಾಮದ ತಿಮ್ಮೇಗೌಡರ ಮಗ ಪ್ರಕಾಶ ಎಂಬುವರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದರು.   

ಹೊಳೆನರಸೀಪುರ: ತಾಲ್ಲೂಕಿನ ಚಾಕೇನಹಳ್ಳಿಯ ಮೆನೆಯ ಮೇಲೆ ಅಬಕಾರಿ ಸಿಬ್ಬಂದಿ ಶುಕ್ರವಾರ ದಾಳಿ ನಡೆಸಿ ₹3.24 ಲಕ್ಷ ಬೆಲೆಯ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಹಳೆಕೋಟೆ ಹೋಬಳಿಯ ಚಾಕೇನಹಳ್ಳಿ ಗ್ರಾಮದ ಪ್ರಕಾಶ ಎಂಬುವವರ ಮನೆ ಮೇಲೆ ದಾಳಿ ನಡೆಸಿ ₹72 ಸಾವಿರ ಬೆಲೆಯ 2 ಕೆ.ಜಿ ಗಾಂಜಾ ಹಾಗೂ ಜಮೀನಿನಲ್ಲಿ ಬೆಳೆದಿದ್ದ ₹2.52 ಲಕ್ಷ ಬೆಲೆ ಬಾಳುವ 7 ಕೆಜಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.

ಅಬಕಾರಿ ಉಪ ಆಯುಕ್ತ ಪಿ.ಗೋಪಾಲಕೃಷ್ಣೇಗೌಡ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಎಚ್.ಎಂ.ರಘು ನೇತೃತ್ವದಲ್ಲಿ ವಲಯ ಅಬಕಾರಿ ನಿರೀಕ್ಷಕ ಶಂಕರಪ್ಪ, ಉಪ ನಿರೀಕ್ಷಕ ಎಸ್.ದೀಪಕ್, ಸಿಬ್ಬಂದಿಗಳಾದ ನಜರುದ್ದೀನ್ ಮುಜಾವರ, ಎ.ಎಂ. ಧ್ರುವಕುಮಾರ್, ಬಿ.ಎಸ್.ಪ್ರಮೋದ್, ವಾಹನ ಚಾಲಕ ಪುನೀತ್ ಕಾರ್ಯಾಚರಣೆಯಲ್ಲಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.