ADVERTISEMENT

ಹೃದಯಾಘಾತದಿಂದ ಅಂಗನವಾಡಿ ಕಾರ್ಯಕರ್ತೆ ಸಾವು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 13:55 IST
Last Updated 25 ಆಗಸ್ಟ್ 2020, 13:55 IST
   

ಹಿರೀಸಾವೆ: ಕೊರೊನಾ ವಾರಿಯರ್‌, ಹೋಬಳಿಯ ಎಂ. ಕಾಮನಘಟ್ಟದ ಅಂಗನವಾಡಿ ಕಾರ್ಯಕರ್ತೆ ಕೆಂಪಮ್ಮ (55) ಮಂಗಳವಾರ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮಕ್ಕಳಿಗೆ ಆಹಾರ ಮತ್ತು ಇಲಾಖೆಗೆ ವರದಿ ನೀಡಲು ಅಂಗನವಾಡಿಗೆ ಬಂದಿದ್ದ ವೇಳೆ ಕುಸಿದು ಬಿದ್ದಿದ್ದಾರೆ.ಆಟವಾಡುತ್ತಿದ್ದ ಹುಡುಗನೋಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾನೆ.

‘ಹಿರೀಸಾವೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಕೋವಿಡ್–19 ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕೋವಿಡ್ ಸೋಂಕು ಇಲ್ಲ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ’ ಎಂದು ವೈದ್ಯಾಧಿಕಾರಿ ಶಿವಸ್ವಾಮಿ ತಿಳಿಸಿದರು.

ADVERTISEMENT

ತುಮಕೂರು ಜಿಲ್ಲೆಯ ಗುಂಗರಮಳೆ ಗ್ರಾಮದ ಕೆಂಪಮ್ಮ ಕೆಲ ವರ್ಷಗಳಿಂದ ತಾಯಿ ಮನೆ ಕಣತೂರು ಗ್ರಾಮದಲ್ಲಿ ವಾಸವಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.