ADVERTISEMENT

ಹಾಸನ: ಜಿಲ್ಲೆಯ ಶಾಸಕರೇ ಆಧಾರ ಸ್ತಂಭಗಳು, ಉಸ್ತುವಾರಿ ಬೇಡ: ಭವಾನಿ ರೇವಣ್ಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 13:30 IST
Last Updated 3 ಜುಲೈ 2021, 13:30 IST
ಭವಾನಿ ರೇವಣ್ಣ 
ಭವಾನಿ ರೇವಣ್ಣ    

ಹಾಸನ: ‘ಜಿಲ್ಲೆಯ ಶಾಸಕರೇ ಪಕ್ಷದ ಆಧಾರಸ್ತಂಭಗಳು. ಅವರು ಇರುವಾಗ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುವುದಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ರೇವಣ್ಣ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪಕ್ಷದಲ್ಲಿ ಸಾಕಷ್ಟು ಮಂದಿ ಹಿರಿಯರಿದ್ದಾರೆ. ಜೊತೆಗೆ ಆರು ಶಾಸಕರು ಮತ್ತು ಒಬ್ಬ ಸಂಸದ ಸಹ ಇದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

‘ಮನೆ ಕಟ್ಟುವುದಕ್ಕೆ ಎಷ್ಟು ಪಿಲ್ಲರ್‌ಗಳು ಬೇಕು. ಅಷ್ಟು ಪಿಲ್ಲರ್‌ಗಳು ಪಕ್ಷದಲ್ಲಿವೆ. ಹೀಗಿರುವಾಗ ಅವರನ್ನು ಬಿಟ್ಟು ಒಬ್ಬಳೇ ನಿರ್ಣಯ ತೆಗೆದುಕೊಳ್ಳುವುದು ಸರಿಯಲ್ಲ. ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT