ADVERTISEMENT

ವಿದ್ಯುತ್‌ ತಂತಿ ತಗುಲಿ ಭತ್ತದ ಹುಲ್ಲು ಭಸ್ಮ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 5:22 IST
Last Updated 4 ಫೆಬ್ರುವರಿ 2021, 5:22 IST
ಕೊಣನೂರು ಸಮೀಪದ ಮತ್ತಿಗೋಡು ಬಳಿ ಭತ್ತದ ಹುಲ್ಲು ಹೊತ್ತು ಸಾಗಿಸುತ್ತಿದ್ದ ಟ್ರಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದೆ
ಕೊಣನೂರು ಸಮೀಪದ ಮತ್ತಿಗೋಡು ಬಳಿ ಭತ್ತದ ಹುಲ್ಲು ಹೊತ್ತು ಸಾಗಿಸುತ್ತಿದ್ದ ಟ್ರಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದೆ   

ಕೊಣನೂರು: ಸಮೀಪದ ಮತ್ತಿಗೋಡು ಬಳಿ ಭತ್ತದ ಹುಲ್ಲು ಹೊತ್ತು ಸಾಗಿಸುತ್ತಿದ್ದ ಟ್ರಾಕ್ಟರ್‌ಗೆ ವಿದ್ಯುತ್ ತಂತಿ ಸ್ಪರ್ಶವಾಗಿ ಹೊತ್ತಿ ಉರಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ರಾಮನಾಥಪುರ ಹೋಬಳಿಯ ಮತ್ತಿಗೋಡಿನಿಂದ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರಕ್ಕೆ ಭತ್ತದ ಹುಲ್ಲು ತುಂಬಿಕೊಂಡು ಟ್ರಾಕ್ಟರ್‌ಗೆ ಹೊರಟಿತ್ತು.

ಬೆಂಕಿಯು ತೀವ್ರತೆ ನೋಡಿ ಚಾಲಕ ಹುಲ್ಲನ್ನು ಅಲ್ಲಿಯೇ ಸುರಿದು ವಾಹನದೊಂದಿಗೆ ಪರಾರಿಯಾಗಿದ್ದಾರೆ. ಹುಲ್ಲು ಸಂಪೂರ್ಣ ಭಸ್ಮವಾಗಿದೆ.

ADVERTISEMENT

ಸುದೈವವಶಾತ್ ಯಾವುದೇ ಪ್ರಾಣಾಪಾಯಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.