ಕೊಣನೂರು: ಆಡು, ಕುರಿಗೆ ಸೊಪ್ಪು ಕಡಿಯಲು ಮರ ಏರಿದ್ದಾಗ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಮರದ ಮೇಲೆ ಮೃತಪಟ್ಟಿದ್ದಾರೆ.
ರಾಮನಾಥಪುರ ಹೋಬಳಿಯ ರಾಗಿಮರೂರು ಗ್ರಾಮದ ಧರ್ಮ (38) ಮೃತವ್ಯಕ್ತಿ.
ಭಾನುವಾರ ಮಧ್ಯಾಹ್ನ ಮರ ಏರಿದ ಅವರು, ಅದೇ ಮರದ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಯನ್ನು ಗಮನಿಸಲಿಲ್ಲ. ಸೊಪ್ಪು ಕಡಿಯುವಾಗ ಮರಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿದೆ.
ಧರ್ಮ ಅವರು ಚಾಲಕರಾಗಿದ್ದು, ಭಾನುವಾರ ಕುರಿ ಮೇಯಿಸಲು ಹೋಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.