ADVERTISEMENT

10 ಲಕ್ಷಕ್ಕೂ ಅಧಿಕ ಮಂದಿಗೆ ಮೊದಲ ಡೋಸ್‌

ನಿತ್ಯ ಜಿಲ್ಲೆಗೆ ಸಾಕಷ್ಟ ಪ್ರಮಾಣದಲ್ಲಿ ಲಸಿಕೆ ಪೂರೈಕೆ: ಡಿಎಚ್ಒ ಸತೀಶ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 16:09 IST
Last Updated 16 ಸೆಪ್ಟೆಂಬರ್ 2021, 16:09 IST
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್ ಅವರು ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲಾ ಕೈಗಾರಿಕಾ ಜಂಟಿನಿರ್ದೇಶಕ ದಿನೇಶ್, ಡಾ.ಹರೀಶ್, ಆರ್.ಸಿ.ಎಚ್. ಅಧಿಕಾರಿ ಡಾ. ಕಾಂತರಾಜ್, ಜಿಲ್ಲಾ ಔಷಧನಿಯಂತ್ರಕ ಗಿರೀಶ್, ತಾಲ್ಲೂಕು ವೈದಾಧಿಕಾರಿ ಡಾ. ವಿಜಯ್, ಜನಪ್ರಿಯ ಆಸ್ಪತ್ರೆ ಮುಖ್ಯಸ್ಥ ಡಾ.ಅಬ್ದುಲ್ ಬಷೀರ್, ಸಣ್ಣ ಕೈಗಾರಿಕೆಗಳ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಓ ಮಹಾಂತಪ್ಪ ಇದ್ದಾರೆ.
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್ ಅವರು ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲಾ ಕೈಗಾರಿಕಾ ಜಂಟಿನಿರ್ದೇಶಕ ದಿನೇಶ್, ಡಾ.ಹರೀಶ್, ಆರ್.ಸಿ.ಎಚ್. ಅಧಿಕಾರಿ ಡಾ. ಕಾಂತರಾಜ್, ಜಿಲ್ಲಾ ಔಷಧನಿಯಂತ್ರಕ ಗಿರೀಶ್, ತಾಲ್ಲೂಕು ವೈದಾಧಿಕಾರಿ ಡಾ. ವಿಜಯ್, ಜನಪ್ರಿಯ ಆಸ್ಪತ್ರೆ ಮುಖ್ಯಸ್ಥ ಡಾ.ಅಬ್ದುಲ್ ಬಷೀರ್, ಸಣ್ಣ ಕೈಗಾರಿಕೆಗಳ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಓ ಮಹಾಂತಪ್ಪ ಇದ್ದಾರೆ.   

ಹಾಸನ : ಕೋವಿಡ್‌ ಲಸಿಕೆಯ ಮೊದಲ ಡೋಸ್‌ ವಿತರಣೆಯಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು,
ಸೆಪ್ಟೆಂಬರ್ ಎರಡನೇ ವಾರದವರೆಗೆ 10,41,075 ಮಂದಿಗೆ ಲಸಿಕೆಯ ಮೊದಲ ಡೋಸ್‌
ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌
ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ
13,61,144 ಮಂದಿ ಇದ್ದು, ಈ ಪೈಕಿ 10,41,075 ಮಂದಿಗೆ ಲಸಿಕೆಯ ಮೊದಲ ಡೋಸ್ ಲಸಿಕೆ
ನೀಡಲಾಗಿದೆ. 3,20,069 ಮಂದಿಗೆ ಲಸಿಕೆ ಹಾಕಬೇಕಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 3.36 ಲಕ್ಷ ಮಂದಿ ಲಸಿಕೆಯ ಎರಡನೇ ಡೋಸ್ ಅನ್ನೂ ಪಡೆದಿದ್ದಾರೆ. ಸುಮಾರು 10 ಲಕ್ಷ ಅಧಿಕ
ಮಂದಿಗೆ ಎರಡನೇ ಡೋಸ್ ಲಸಿಕೆ ನೀಡುವ ಅಗತ್ಯವಿದೆ ಎಂದರು.

ADVERTISEMENT

ಸೆ.17 ರಂದು ಜಿಲ್ಲೆಯಲ್ಲಿ ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ನಿತ್ಯ ಜಿಲ್ಲೆಗೆ ಸಾಕಷ್ಟುಪ್ರಮಾಣದಲ್ಲಿ ಲಸಿಕೆ ಬರುತ್ತಿದ್ದು, 10 ರಿಂದ 20 ಸಾವಿರ ಮಂದಿಗೆ ನಿತ್ಯ ಲಸಿಕೆ ಹಾಕಲಾಗುತ್ತಿದೆ. ಈವರೆಗೆ 1,90,560 ಡೋಸ್‌ ಕೋವ್ಯಾಕ್ಸಿನ್ ಹಾಗೂ 10,94,760 ಡೋಸ್‌ ಕೋವಿಶೀಲ್ಢ್ ಜಿಲ್ಲೆಗೆ ಪೂರೈಕೆಯಾಗಿದೆ ಎಂದು ವಿವರಿಸಿದರು.

ಕಾರ್ಮಿಕರಿಗೆ ಲಸಿಕೆ ನೀಡಲು ಸೂಚನೆ: ಶುಕ್ರವಾರದ ಲಸಿಕಾ ಮೇಳದಲ್ಲಿ ಕೈಗಾರಿಕಾ ಸಂಸ್ಥೆಗಳಲ್ಲಿ ಬಾಕಿ ಉಳಿದಿರುವ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಲಸಿಕೆ ನೀಡಬೇಕುಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದರು.

ಖಾಸಗಿ ಆಸ್ಪತ್ರೆ ಮುಖ್ಯಸ್ಥರು ಹಾಗೂ ಕೈಗಾರಿಕಾ ಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದ ಅವರು,
ಕೆಐಎಡಿಬಿ ಆವರಣ ಹಾಗೂ ಹಿಮ್ಮತ್‌ ಸಿಂಕಾ ಕಾರ್ಖಾನೆ ಬಳಿ ಲಸಿಕಾ ಕೇಂದ್ರ ಸ್ಥಾಪಿಸಬೇಕು. ಲಕ್ಷಕ್ಕೂ
ಅಧಿಕ ಡೋಸ್‌ ನೀಡುವ ಗುರಿ ನಿಗದಿಪಡಿಸಿದ್ದು, ಇದಕ್ಕೆ ಎಲ್ಲರ ಸಹಕಾರ ಅವಶ್ಯಕ ಎಂದರು.

‌ಜಿಲ್ಲೆಯಲ್ಲಿ ಸುಮಾರು 63,058 ನೋಂದಾಯಿತ ಕಟ್ಟಡ ಕಾರ್ಮಿಕರು, 3205 ತೋಟ ಕಾರ್ಮಿಕರು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ 27,236 ಮಂದಿ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಸುಮಾರು 15,300 ಹಾಗೂ ಅಸಂಘಟಿತ ವಲಯದ 20,186 ಕಾರ್ಮಿಕರು ಲಸಿಕೆ ಪಡೆಯಲು ಅರ್ಹರು. ಆದ್ದರಿಂದ ಎಲ್ಲಾ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರು ಸಮೀಪದ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದುಕೊಳ್ಳುವಂತೆ ಕಾರ್ಮಿಕ ಇಲಾಖೆ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.