ADVERTISEMENT

ಹೊಳೆನರಸೀಪುರ: ಪತ್ರಕರ್ತರ ಸಂಘಕ್ಕೆ ವೆಂಕಟೇಶ್ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 5:33 IST
Last Updated 31 ಡಿಸೆಂಬರ್ 2025, 5:33 IST
ಹೊಳೆನರಸೀಪುರ ತಾಲ್ಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳನ್ನು ಹಾಸನ ಪತ್ರಕರ್ತರ ಭವನದಲ್ಲಿ ಸೋಮವಾರ ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಜೆ.ಆರ್.ಕೆಂಚೇಗೌಡ, ರಾಜ್ಯ ಉಪಾಧ್ಯಕ್ಷ ಎಚ್.ಬಿ.ಮದನ್‍ಗೌಡ, ರಾಜ್ಯಸಮಿತಿ ಸದಸ್ಯ ಪ್ರಮೋದ್, ಉಪಾಧ್ಯಕ್ಷ ನಂಜುಂಡೇಗೌಡ, ಕಾರ್ಯದರ್ಶಿ ಸುರೇಶ್, ತಾಲ್ಲೂಕು ಉಸ್ತುವಾರಿ ಬೊಮ್ಮೇಗೌಡ, ಉದಯಕುಮಾರ್, ಬಾಳ್ಳುಗೋಪಾಲ್ ಹಾಜರಿದ್ದರು
ಹೊಳೆನರಸೀಪುರ ತಾಲ್ಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳನ್ನು ಹಾಸನ ಪತ್ರಕರ್ತರ ಭವನದಲ್ಲಿ ಸೋಮವಾರ ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಜೆ.ಆರ್.ಕೆಂಚೇಗೌಡ, ರಾಜ್ಯ ಉಪಾಧ್ಯಕ್ಷ ಎಚ್.ಬಿ.ಮದನ್‍ಗೌಡ, ರಾಜ್ಯಸಮಿತಿ ಸದಸ್ಯ ಪ್ರಮೋದ್, ಉಪಾಧ್ಯಕ್ಷ ನಂಜುಂಡೇಗೌಡ, ಕಾರ್ಯದರ್ಶಿ ಸುರೇಶ್, ತಾಲ್ಲೂಕು ಉಸ್ತುವಾರಿ ಬೊಮ್ಮೇಗೌಡ, ಉದಯಕುಮಾರ್, ಬಾಳ್ಳುಗೋಪಾಲ್ ಹಾಜರಿದ್ದರು   

ಹೊಳೆನರಸೀಪುರ: ತಾಲ್ಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಬಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ರಾಮಕೃಷ್ಣ ಆಯ್ಕೆಯಾದರು.

ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ಚುನಾವಣೆ ನಡೆಯಿತು. ಕಾರ್ಯದರ್ಶಿಯಾಗಿ ಅಭಿಲಾಷ್, ಖಜಾಂಚಿಯಾಗಿ ಎಲ್.ಚಂದ್ರಶೇಖರ್ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸಮ ಮತಗಳನ್ನು ಪಡೆದ ಎಚ್.ಜಿ.ವೆಂಕಟೇಶ್, ಡಿ.ಕೆ.ವಸಂತಯ್ಯ ಅವರಿಗೆ ತಲಾ ಒಂದೂವರೆ ವರ್ಷ ಅಧಿಕಾರ ನೀಡಲು ಸದಸ್ಯರು ನಿರ್ಧರಿಸಿದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರ್ಷ, ಭಾನುಮತಿ, ವಿಶ್ವನಾಥ್, ದನಂಜಯ, ಕೆ.ಎಸ್.ಚಂದ್ರು, ಅವಿರೋಧವಾಗಿ ಆಯ್ಕೆ ಆದರು. ಚುನಾವಣಾಧಿಕಾರಿಯಾಗಿ ಸುವರ್ಣಹರೀಶ್ ಹಾಗೂ ನಾಗರಾಜು ಕಾರ್ಯನಿರ್ವಹಿಸಿದರು. ಜಿಲ್ಲಾ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ವಿ.ಸುರೇಶ್ ಕುಮಾರ್ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.