ADVERTISEMENT

ಪಕ್ಷಕ್ಕೆ ಮುಜುಗರ ತರುತ್ತಿರುವ ಜಿಟಿಡಿ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 5:40 IST
Last Updated 2 ಮಾರ್ಚ್ 2020, 5:40 IST
ಎಚ್‌.ಕೆ ಕುಮಾರಸ್ವಾಮಿ
ಎಚ್‌.ಕೆ ಕುಮಾರಸ್ವಾಮಿ    

ಹಾಸನ: ‘ಜೆಡಿಎಸ್‌ ಬಗ್ಗೆ ನಿಷ್ಠೆ ಇದ್ದರೆ ಶಾಸಕ ಜಿ.ಟಿ.ದೇವೇಗೌಡ ಅವರು ಪಕ್ಷದಲ್ಲೇ ಇರಲಿ. ಹೊರ ಹೋಗುವುದಾದರೆ ಹೋಗಲಿ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಭಾನುವಾರ ಇಲ್ಲಿ ಹೇಳಿದರು.

‘ಜಿ.ಟಿ.ದೇವೇಗೌಡ ಅವರ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತರುತ್ತಿದ್ದು, ಹಿರಿಯರು ಎಂಬ ಕಾರಣಕ್ಕೆ ಪಕ್ಷ ಇದುವರೆಗೆ ಸಹಿಸಿಕೊಂಡಿದೆ. ದೇಹ ಇಲ್ಲಿ ಮನಸ್ಸು ಇನ್ನೆಲ್ಲೋ ಬೇಡ. ಗೊಂದಲದ ಹೇಳಿಕೆ ನೀಡುತ್ತ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಬೇಡ’ ಎಂದರು.

ಪಕ್ಷ ಸಂಘಟನೆಗೆ ರಾಜಕೀಯ ತಜ್ಞ ಪ್ರಶಾಂತ್‌ ಕಿಶೋರ್‌ ಅವರನ್ನು ಕರೆಸುವ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದು, ಇದುವರೆಗೆ ಭೇಟಿ ಮಾಡಿಲ್ಲ ಎಂದು ನುಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.