ಸಕಲೇಶಪುರ: ತಾಲ್ಲೂಕಿನ ಹಲವೆಡೆ ಸೋಮವಾರ ಸಂಜೆ 5 ಗಂಟೆಯಿಂದ ಗುಡುಗು, ಮಿಂಚು, ಸಿಡಿಲು ಸಹಿತ ಧಾರಾಕಾರವಾಗಿ ಮಳೆ ಸುರಿಯಿತು.
ಮಧ್ಯಾಹ್ನ ಸುಮಾರು 1 ಗಂಟೆಯಿಂದಲೇ ಮಳೆ ಮೋಡ ಮುಸುಕು ಹೊದ್ದು ಮಳೆಯ ಮುನ್ಸೂಚನೆ ಇತ್ತು. ಮಳೆ ಇಲ್ಲದೆ ಒಣಗುತ್ತಿದ್ದ ಭತ್ತದ ಬೆಳೆಗೆ ಮಳೆ ತಂಪೆರೆಯಿತು. ತೆನೆ ಹೊರಡುವ ಈ ಹಂತದಲ್ಲಿ ಭತ್ತದ ಬೆಳೆಗೆ ಸಾಕಷ್ಟು ನೀರು ಬೇಕು. ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸಂಜೆ 5 ರಿಂದ 6 ಗಂಟೆ ಅವದಿಯಲ್ಲಿ ಅಂದಾಜು 25 ಮಿ.ಮೀ. ಮಳೆಯಾಗಿದೆ. ಸಂಜೆ 6ರ ನಂತರವೂ ಮಳೆ ಸುರಿಯುತ್ತಲೇ ಇತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.