ADVERTISEMENT

ಹೊಳೆನರಸೀಪುರ | ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ: ಒಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 13:59 IST
Last Updated 25 ಏಪ್ರಿಲ್ 2024, 13:59 IST
ಕಾಂಗ್ರೆಸ್‌–ಜೆಡಿಎಸ್‌
ಕಾಂಗ್ರೆಸ್‌–ಜೆಡಿಎಸ್‌   

ಹೊಳೆನರಸೀಪುರ: ತಾಲ್ಲೂಕಿನ ಬಿಟ್ಟಗೌಡನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ  ವಾಗ್ವಾದ, ತಳ್ಳಾಟದಲ್ಲಿ ಚರಂಡಿಗೆ ಬಿದ್ದು ಒಬ್ಬರು ಗಾಯಗೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಟ್ಟಗೌಡನಹಳ್ಳಿ ಗ್ರಾಮದ ರಮೇಶ್, ಪ್ರಕಾಶ್ ಮತ್ತು ಬಸವರಾಜ್ ಗುರುವಾರ ಬೆಳಿಗ್ಗೆ ಕಾಂಗ್ರೆಸ್ ಪರ ಮತ ಕೇಳುತ್ತಿದ್ದಾಗ ಚಂದನ(ಶಂಕರ), ಬಸವರಾಜ್ ಹಾಗೂ ಅಭಿಲಾಷ್ ಎಂಬುವರು ‘ಇದು ಜೆಡಿಎಸ್ ಭದ್ರಕೋಟೆ ಇಲ್ಲೇಕೆ ಪ್ರಚಾರ ಮಾಡುತ್ತಿದ್ದೀರಿ’ ಎಂದು ತಡೆದಿದ್ದಾರೆ. ಎರಡೂ ಗುಂಪುಗಳ ನಡುವೆ ಜಗಳ ಆಗುವಾಗ ತಳ್ಳಾಟದಲ್ಲಿ ಬಸವರಾಜ್ ಚರಂಡಿಗೆ ಬಿದ್ದು, ಸೊಂಟಕ್ಕೆ ಪೆಟ್ಟು ಬಿದ್ದಿದೆ. ಅವರ ಹೇಳಿಕೆ ಪಡೆದ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT