ಹಾಸನ: ತಾಲ್ಲೂಕಿನ ಕೆ.ಬ್ಯಾಡರಹಳ್ಳಿಯ ಶಿವಣ್ಣ ಎಂಬುವವರ ಮನೆಯೊಳಗೆ ಚಿರತೆ ನುಗ್ಗಿದೆ. ಮನೆಯ ದನದ ಕೊಟ್ಟಿಗೆಯಲ್ಲಿ ಚಿರತೆ ಅಡಗಿದೆ. ಬೆಳಿಗ್ಗೆ ಮನೆಯವರು ಕೊಟ್ಟಿಗೆಯೊಳಗೆ ಹೋದಾಗ ಚಿರತೆ ನೋಡಿ ಗಾಬರಿಯಿಂದ ಕಿರುಚಿಕೊಂಂಡು ಹೊರ ಬಂದಿದ್ದಾರೆ.
ಮನೆಯ ಬಾಗಿಲು ಹಾಕಿಕೊಂಡು ಅರಣ್ಯ ಇಲಾಖೆ ಗೆ ವಿಷಯ ತಿಳಿಸಿದರು.ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಭೇಟಿ ನೀಡಿದ್ದು ಚಿರತೆ ಸೆರೆಗೆ ಕಾರ್ಯಾಚರಣೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.