ADVERTISEMENT

ಚನ್ನರಾಯಪಟ್ಟಣ: ನವ ದಂಪತಿಯಿಂದ ಪೊಲೀಸರಿಗೆ ಊಟ

​ಪ್ರಜಾವಾಣಿ ವಾರ್ತೆ
Published 3 ಮೇ 2020, 14:40 IST
Last Updated 3 ಮೇ 2020, 14:40 IST
ಚನ್ನರಾಯಪಟ್ಟಣದಲ್ಲಿ ನವದಂಪತಿ ಭಾನುವಾರ ಪೊಲೀಸ್ ಸಿಬ್ಬಂದಿಗೆ ಮದುವೆಯ ಊಟ ನೀಡಿದರು. ಪಿಎಸ್‌ಐ ಎಲ್.ಎನ್. ಕಿರಣ್‌ಕುಮಾರ್ ಮತ್ತು ಸಿಬ್ಬಂದಿ ಇದ್ದಾರೆ
ಚನ್ನರಾಯಪಟ್ಟಣದಲ್ಲಿ ನವದಂಪತಿ ಭಾನುವಾರ ಪೊಲೀಸ್ ಸಿಬ್ಬಂದಿಗೆ ಮದುವೆಯ ಊಟ ನೀಡಿದರು. ಪಿಎಸ್‌ಐ ಎಲ್.ಎನ್. ಕಿರಣ್‌ಕುಮಾರ್ ಮತ್ತು ಸಿಬ್ಬಂದಿ ಇದ್ದಾರೆ   

ಚನ್ನರಾಯಪಟ್ಟಣ: ಹಸೆಮಣೆ ಏರಿದ ನೂತನ ದಂಪತಿ ಭಾನುವಾರ ಪೊಲೀಸರಿಗೆ ಮದುವೆಯ ಊಟ ನೀಡಿದರು.

ತಾಲ್ಲೂಕಿನ ಗದ್ದೆಬಿಂಡೇನಹಳ್ಳಿ ಗ್ರಾಮದ ರಮ್ಯಾ, ಹಾಸನ ತಾಲ್ಲೂಕು ಅಂಕಪುರ ಗ್ರಾಮದ ಸಂದೇಶ ಅವರ ವಿವಾಹ ಸಮಾರಂಭ ವಧುವಿನ ಊರಿನಲ್ಲಿ ನಡೆಯಿತು. ಲಾಕ್‌ಡೌನ್ ಇರುವುದರಿಂದ ವಿವಾಹ ಸಮಾರಂಭ ಸರಳವಾಗಿ ನೆರವೇರಿತು. ಬಳಿಕ ದಂಪತಿ ಪೊಲೀಸ್ ಠಾಣೆಗೆ ತೆರಳಿ ವಿವಾಹದ ನಿಮಿತ್ತ ತಯಾರಿಸಿದ ಅಡುಗೆಯನ್ನು ಪೊಲೀಸರಿಗೆ ಉಣ ಬಡಿಸಿದರು.

ಕೊರಾನಾ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.